ಡೈಲಿ ವಾರ್ತೆ: 31 ಜನವರಿ 2023

ಫೆ. 3 ರಂದು ಕೊಡಮಕ್ಕಿ ಜಂಗಲ್ಪೀರ್ ನಲ್ಲಿ ಸ್ವಲಾತ್ ಮಜ್ಲಿಸ್ ಹಾಗೂ ಪ್ರಾರ್ಥನಾ ಸಂಗಮ

ಬೈಂದೂರು : ಹಲವು ಪವಿತ್ರಗಳಿoದ ಕೊಡಿದ ಒಂದು ಪ್ರದೇಶವಾಗಿದೆ ಕೊಡಮಕ್ಕಿ ಜಂಗಲ್ಪೀರ್ ಫೆಬ್ರವರಿ 3 ಶುಕ್ರವಾರ ಸಂಜೆ ಜಂಗಲ್ಪೀರ್ ಗೌಸಿಯ ಮಸೀದಿಯ ವಠಾದಲ್ಲಿ ಆಧ್ಯಾತ್ಮಿಕ ನಾಯಕರಾದ ಮೌಲಾನಾ ಡಾ. ಮುಹಮ್ಮದ್ ಫಾಝಲ್ ರಝ್ವಿ ಕಾವಳಕಟ್ಟೆ ಹಜ್ರತ್ ರವರ ನೇತೃತ್ವದಲ್ಲಿ ಬೃಹತ್ ಸ್ವಲಾತ್ ಮಜ್ಲಿಸ್ ಹಾಗೂ ಪ್ರಾರ್ಥನಾ ಸಂಗಮ ನಡೆಯಲಿದೆ.

ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಸಿ ಹೆಚ್ ಅಬ್ದುಲ್ ಮುತ್ತಲಿ ವಂಡ್ಸೆ ರವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅಸ್ಸಯ್ಯಿದ್ ಜಾಫರ್ ಅಸ್ಸಖಾಪ್ ತಂಗಲ್ ಉದ್ಘಾಟಿಸುವರು.
ರಾಜ್ಯ ವಕ್ಫ್ ಬೋರ್ಡ್ ಸದಸ್ಯರಾದ ಯಾಕೂಬ್ ಯೂಸುಫ್ ಬೆಂಗಳೂರು, ಹಾಗೂ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರುಗಳು, ಸದಸ್ಯರು ಹಾಗೂ ಇನ್ನಿತರ ಹಲವು ಗಣ್ಯರು ಭಾಗಹಿಸಲಿದ್ದಾರೆ.

ಈ ಕಾರ್ಯಕ್ರಮವನ್ನು ಯಶಸ್ಸುಗಳಿಸಬೇಕಾಗಿ ಜಂಗಲ್ಪೀರ್ ಪ್ರೊಜೆಕ್ಟ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬದ್ರುದ್ದೀನ್ ತೌಫೀಖ್ ನಾವುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.