ಡೈಲಿ ವಾರ್ತೆ:06 ಫೆಬ್ರವರಿ 2023

ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆ. ಬಿಲಿಯನ್ ಫೌಂಡೇಶನ್ ವಿಧ್ಯಾರ್ಥಿ ಶೈಕ್ಷಣಿಕ ಪ್ರೋತ್ಸಾಹಧನ ವಿತರಣೆ ಹಾಗೂ ಅಭಿನಂದನಾ ಸಮಾರಂಭ

ಕೋಟ: ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆ. ಬಿಲಿಯನ್ ಫೌಂಡೇಶನ್ ವಿಧ್ಯಾರ್ಥಿ ಶೈಕ್ಷಣಿಕ ಪ್ರೋತ್ಸಾಹಧನ ವಿತರಣೆ ಹಾಗೂ ಅಭಿನಂದನಾ ಸಮಾರಂಭ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಕೂಟಬಂಧು ಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಅಂಗಸಂಸ್ಥೆಯ ಅಧ್ಯಕ್ಷ ಶೀಪತಿ ಅಧಿಕಾರಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಕೆ. ಎಸ್. ಕಾರಂತರು ಮಾತನಾಡುತ್ತಾ ಈ ಪ್ರೋತ್ಸಾಹಧನ ಗುರುನರಸಿಂಹನ ಅನುಗ್ರಹದಿಂದ ಲೇಪಿತವಾದ ಪ್ರಸಾದ ರೂಪದಲ್ಲಿ ಕೊಡುವಂತಹದ್ದು. ಇದನ್ನು ಪಡೆದುಕೊಂಡ ಕೈ ಮುಂದೊಂದು ದಿನ ಕೊಡುವ ಕೈಯಾಗಬೇಕೆಂದು ನುಡಿದರು.
ಸಮಾರಂಭದಲ್ಲಿ ಕೇಂದ್ರಾಧ್ಯಕ್ಷ ಶ್ರೀ ಸತೀಶ ಹಂದೆ ಉಪಸ್ಥಿತರಿದ್ದರು.


ಈ ಸಂಧರ್ಭದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶೀಮತಿ ಜಾನಕಿ ಹಂದೆ ಹಾಗೂ ಉಡುಪಿ ಎಮ್. ಜಿ. ಎಮ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಲಕ್ಷ್ಮೀನಾರಾಯಣ ಕಾರಂತರನ್ನು
ಅಭಿನಂದಿಸಲಾಯ್ತು. ಅಲ್ಲದೆ ಬಿಲಿಯನ್ ಫೌಂಡೇಶನ್ ನ್ನಿಂದ ಎಸ್. ಎಸ್. ಎಲ್. ಸಿ, ಪಿ.ಯು.ಸಿ. ಹಾಗೂ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ವಿತರಿಸಲಾಯಿತು.
ಅಂಗಸಂಸ್ಥೆಯ ಕಾರ್ಯದರ್ಶಿ ಮಹಾಬಲ ಹಂದೆ ಸ್ವಾಗತಿಸಿದರು.

ಮಂಜುನಾಥ ಉಪಾಧ್ಯರು ವಂದಿಸಿದರು.
ಜತೆಕಾರ್ಯದರ್ಶಿ ಚಿದಾನಂದ ತುಂಗ ಕಾರ್ಯಕ್ರಮ ನಿರ್ವಹಿಸಿದರು.
ಅಮರಹಂದೆ ಹಾಗೂ ಗಿರೀಶ ಮೈಯ ಸನ್ಮಾನ ಪತ್ರ ವಾಚಿಸಿದರು.