ಡೈಲಿ ವಾರ್ತೆ:10 ಫೆಬ್ರವರಿ 2023

ದಕ್ಷಿಣಕನ್ನಡ: ಅನ್ಯಕೋಮಿನ ಜೋಡಿಗೆ ಹಲ್ಲೆ; ನಾಲ್ವರ ಬಂಧನ

ಮಂಗಳೂರು: ಕದ್ರಿ ಉದ್ಯಾನವನದ ಬಳಿ ಅನ್ಯಕೋಮಿನ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿದ ನಾಲ್ವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಕಡಬದ ಯಶ್ವಿ‌ತ್‌, ಚಿಕ್ಕಮಗಳೂರಿನ ಶರತ್‌, ಅಳಪೆಯ ಧೀರಜ್‌, ಬಂಟ್ವಾಳದ ಅಭಿಜಿತ್‌ ಬಂಧಿತ ಆರೋಪಿಗಳು

ಅವರು ಹಿಂದೂ ಸಂಘಟನೆಯ ಕಾರ್ಯಕರ್ತರು ಎಂದು ಹೇಳಲಾಗಿದೆ. ಆರೋಪಿಗಳು ಬುಧವಾರ ಉತ್ತರ ಕರ್ನಾಟಕ ಮೂಲದ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.