ಡೈಲಿ ವಾರ್ತೆ:19 ಫೆಬ್ರವರಿ 2023

ಕರ್ನಾಟಕ ಸುನ್ನೀ ಸಂಘಟನೆಯ ಉಡುಪಿ ಜಿಲ್ಲಾ ಘಟಕದ ಕಾರ್ಯಕರ್ತರ ಸಂಗಮ

ಬ್ರಹ್ಮಾವರ: ಕರ್ನಾಟಕ ಸುನ್ನೀ ಸಂಘಟನೆಗಳ ಭವನ ಮರ್ಕಝುಲ್ ಇಸ್ಲಾಮೀ ಪೂರ್ತಿಕರಣದ ಭಾಗವಾಗಿ ಉಡುಪಿ ಜಿಲ್ಲಾ ಸುನ್ನೀ ಸಂಘ ಕುಟುಂಬಗಳ ಕಾರ್ಯಕರ್ತರ ಸಂಗಮವು ದಿನಾಂಕ 18 ರಂದು ಶನಿವಾರ ಬ್ರಹ್ಮಾವರ ಮದರ್ ಪ್ಯಾಲೇಸ್ ಮಿನಿ ಹಾಲ್ ನಲ್ಲಿ ಜಿಲ್ಲಾ ಉಲಮಾ ಒಕ್ಕೂಟದ ಅಧ್ಯಕ್ಷ ಆಶ್ರಫ್ ಸಖಾಫಿ ಕಣ್ಣಂಗಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಕಾರ್ಯಕ್ರಮವನ್ನು ರಾಜ್ಯ ಉಲಮಾ ಒಕ್ಕೂಟದ
ಪ್ರಧಾನ ಕಾರ್ಯದರ್ಶಿ ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ಸಭೆಯನ್ನು ಉದ್ಘಾಟಿಸಿದರು.

ಆಸ್ಥಾನ ಪೂರ್ತಿಕರಣದ ನಿರ್ವಹಣಾ ಸಮಿತಿಯ ರಾಜ್ಯ ಕನ್ವೀನರ್ ಎಂ ಪಿ ಎಂ ಆಶ್ರಫ್ ಸಅದಿ ವಿಷಯ ಮಂಡಿಸಿದರು.
ಜಿಲ್ಲಾ ಉಲಮ ಒಕ್ಕೂಟದ ನಾಯಕ ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ರಾಜ್ಯ ನಾಯಕ ಇಸ್ಮಾಯಿಲ್ ಸಅದಿ ಕಿನ್ಯ, ಜನಾಬ್ ದಸ್ತಗೀರ್ ಕಂಡ್ಲೂರ್, ಕೆ ಪಿ ಇಬ್ರಾಹಿಂ ಮಟಪಾಡಿ, ಕಬೀರ್ ಹಾಜಿ ಕನ್ನoಗಾರ್,, ಎಂ ಎ ಬಾವು ಹಾಜಿ ಮೂಳೂರು, ಅಡ್ವಕೆಟ್ ಇಲ್ಯಾಸ್ ನಾವುಂದ, ಪುರಸಭಾ ಸದಸ್ಯ ಅಷ್ಪಾಕ್ ಕೋಡಿ, ಕೆ ಎಚ್ ಹುಸೇನ್, ಬಶೀರ್ ಮದನಿ ಕಟಪಾಡಿ, ಹನೀಫ್ ಮದನಿ ಅಂಬಾಗಿಲು, ಉಮರ್ ಮದನಿ ಸಂತೋಷನಗರ, ಸುಭಾನ್ ಅಹ್ಮದ್ ಹೊನ್ನಾಲ, ಶಹಬಾನ್ ಹಂಗ್ಲೂರು ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು.




ನೂತನ ಉಡುಪಿ ಜಿಲ್ಲಾ ನಿರ್ವಹಣಾ ಸಮಿತಿ ರಚಿಸಲಾಯಿತು.
ಅಧ್ಯಕ್ಷರು: ಅಡ್ವಕೇಟ್ ಹಮ್ಝತ್ ಹೆಜಮಾಡಿ
ಪ್ರದಾನ ಕಾರ್ಯದರ್ಶಿ ಪಿ ಪಿ ಬಶೀರ್ ಮುಸ್ಲಿಯಾರ್ ಮಜೂರು
ಕೋಶಾಧಿಕಾರಿ ಇಸ್ಮಾಯೀಲ್ ಮದನಿ ಮಾವಿನಕಟ್ರೆ
ಜಿಲ್ಲಾ ಸಂಚಾಲಕರಾಗಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ
ಉಪಾಧ್ಯಕ್ಷರುಗಳು ಅಶ್ರಫ್ ಸಖಾಫಿ ಕಣ್ಣಂಗಾರು, ಕೆ ಪಿ ಇಬ್ರಾಹಿಮ್ ಹಾಜಿ, ಸುಭಾನ್ ಅಹ್ಮದ್ ಕಾರ್ಯದರ್ಶಿಗಳಾಗಿ ಶಹಬಾನ್ ಹoಗಳೂರು, ಅಡ್ವಕೆಟ್ ಇಲ್ಯಾಸ್, ಇಮ್ರಾನ್ ಚಂದ್ರನಗರ, ತಾಲೂಕು ಸಂಚಾಲಕರಾಗಿ ಬೈಂದೂರು ಕೆ ಎಮ್.ಎಚ್ ಝುಹ್ರಿ ಕೋಯ ನಾಗರ, ಕುಂದಾಪುರ ಅಬ್ದುರ್ರಹ್ಮಾನ್ ಸಖಾಫಿ ಕೋಡಿ, ಬ್ರಹ್ಮಾವರ ರಝಾಕ್ ಉಸ್ತಾದ್ ಸಾಸ್ತಾನ, ಉಡುಪಿ ಇಬ್ರಾಹಿಂ ಸಖಾಫಿ ಕಟಪಾಡಿ,ಕಾಪು ಶಬೀರ್ ಸಖಾಫಿ ಉಚ್ಚಿಲ ಹಾಗೂ ಕಾರ್ಕಳ ಸುಲೈಮಾನ್ ಸಅದಿ ಹೊಸ್ಮಾರು ಎಲ್ಲಾ ಜಿಲ್ಲಾ ಸುನ್ನೀ ಸಂಘಟನೆಗಳ ಅಧ್ಯಕ್ಷರುಗಳನ್ನು ಈ ಸಮಿತಿಯ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು
ಅಡ್ವಕೇಟ್ ಹಮ್ಜತ್ ಸ್ವಾಗತಿಸಿದರು ಕಲ್ಕಟ್ಟ ರಝ್ವಿ ನಿರೂಪಿಸಿದರು ಅಡ್ವಕೇಟ್ ಇಲ್ಯಾಸ್ ವಂದಿಸಿದರು.