ಡೈಲಿ ವಾರ್ತೆ:21 ಫೆಬ್ರವರಿ 2023

ಜೆಪಿ ನಡ್ಡಾ ಕೈಯಲ್ಲಿ ವೈಯಕ್ತಿಕ ಕೈಪಿಡಿ ಬಿಡುಗಡೆ ಮಾಡಿಸಿ ಕೊಂಡ ಬೈಂದೂರು ಶಾಸಕ: ವೇದಿಕೆಯಲ್ಲೇ ಶಾಸಕರನ್ನು ತರಾಟೆಗೆ ತೆಗೆದುಕೊಂಡ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್.!(ವಿಡಿಯೋ ವೀಕ್ಷಿಸಿ)

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಜೆಪಿ ನಡ್ಡಾ ಅವರ ಕೈಯಲ್ಲಿ ವೈಯಕ್ತಿಕ ಕೈಪಿಡಿ ಬಿಡುಗಡೆ ಮಾಡಿಸಿ ಕೊಂಡ ಶಾಸಕರ ಮೇಲೆ ನಾಯಕರು ಗರಂ ಆದ ಘಟನೆ ನಡೆಯಿತು.

ಜೆಪಿ ನಡ್ಡಾ ಅವರಿಗೆ ಕ್ಷೇತ್ರದ ಜನತೆ ಪರವಾಗಿ ಸನ್ಮಾನಿಸುವ ಸಂದರ್ಭದಲ್ಲಿ ಬೈಂದೂರು ಶಾಸಕರು ಸರಕಾರದ ಕೈಪಿಡಿ ಬದಲಿಗೆ ಶಾಸಕರ ವೈಯಕ್ತಿಕ ಕೈಪಿಡಿ ಬಿಡುಗಡೆ ಮಾಡಿಸಿದರು.
ಇದನ್ನು ನೋಡಿ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ವೇದಿಕೆಯಲ್ಲಿಯೇ ಶಾಸಕ ಸುಕುಮಾರ ಶೆಟ್ಟಿ ಅವರ ಮೇಲೆ ಗರಂ ಆಗಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.
ಸದ್ಯ ಈ ವಿಡಿಯೋ ಕ್ಷೇತ್ರದಾದ್ಯಂತ ವೈರಲಾಗಿದ್ದು ಶಾಸಕರ ಕಾರ್ಯಕ್ಕೆ ಸ್ವಪಕ್ಷೀಯರಿಂದಲೇ ಅಸಮಾಧಾನ ವ್ಯಕ್ತವಾಗಿದೆ.

ಈ ಹಿಂದೆ ಸಮುದ್ರ ಸ್ನಾನಕ್ಕೆ ತೆರಳಿದ್ದಾಗ ಪಂಚೆ ಜಾರಿ ಸುದ್ದಿಯಾಗಿದ್ದ ಶಾಸಕ ಸುಕುಮಾರ ಶೆಟ್ಟಿ ಬಳಿಕ ಮುಸ್ಲಿಂ ಮುಖಂಡರ ಕಾಲಿಗೆ ಬಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು