ಡೈಲಿ ವಾರ್ತೆ:09 ಮಾರ್ಚ್ 2023

ದಕ್ಷಿಣಕನ್ನಡ: ಲಾರಿ ಚಾಲನೆ ವೇಳೆ ಲಾರಿ ಡ್ರೈವರ್‍ ಗೆ ಕಾಣಿಸಿಕೊಂಡ ಮೂರ್ಛ ರೋಗ, ಲಾರಿ ಹಲವು ವಾಹನಗಳಿಗೆ ಢಿಕ್ಕಿ

ಬಂಟ್ವಾಳ:ಲಾರಿ ಚಾಲನೆ ಮಾಡುವಾಗ ಲಾರಿ ಡ್ರೈವರ್ ಗೆ ಮೂರ್ಛ ರೋಗ ಕಾಣಿಸಿಕೊಂಡು ಲಾರಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಅವಾಂತರ ಸೃಷ್ಟಿಸಿದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ.

ಮಂಗಳೂರು ಕಡೆಯಿಂದ ಹಾಸನಕ್ಕೆ ಹೋಗುತ್ತಿದ್ದ ಲಾರಿ ಬಿಸಿರೋಡು ತಲುಪುತ್ತಿದ್ದಂತೆ ಚಾಲಕ ಲಕ್ಷ್ಮಣ್ ಗೆ ಮೂರ್ಛ ರೋಗ ಕಾಣಿಸಿಕೊಂಡಿದೆ.
ಇದರಿಂದ ಲಾರಿ, ಬೈಕ್, ಕಾರುಗಳಿಗೆ ಗೆ ಡಿಕ್ಕಿ ಹೊಡೆದು ಬಳಿಕ ಪೆಟ್ರೋಲ್ ಪಂಪ್ ನಲ್ಲಿ ನಿಲ್ಲಿಸಲಾಗಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಘಟನೆಯಲ್ಲಿ ಅದೃಷ್ಟಾವಶಾತ್ ಪ್ರಾಣಾಪಾಯ ಉಂಟಾಗಿಲ್ಲ.
ಘಟನೆ ಬಳಿಕ ತಕ್ಷಣ ಚಾಲಕ ಲಕ್ಷಣ್ ಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.