ಡೈಲಿ ವಾರ್ತೆ:12 ಮಾರ್ಚ್ 2023

ವರದಿ: ವಿದ್ಯಾಧರ ಮೊರಬಾ

ಹೊನ್ನೆಕೇರಿಯಲ್ಲಿ ಗ್ಯಾಸ್ ಸಿಲೆಂಡರ್‍ಗೆ ಬೆಂಕಿ: ಅಲ್ಪ ಪ್ರಮಾಣದ ಹಾನಿ !

ಅಂಕೋಲಾ : ಗ್ಯಾಸ್ ಸಿಲೆಂಡರ್‍ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮವಾಗಿ ಗ್ಯಾಸ್‍ಒಲೆ, ಇನ್ನಿ ತರ ಪರಿಕರಗಳು ಸುಟ್ಟು ಕರಕಲಾದ ಘಟನೆ ಪಟ್ಟಣದ ಹೊನ್ನೆಕೇರಿಯಲ್ಲಿ ಭಾನುವಾರ ಸಂಜೆ ನಡೆದಿದೆ.

ಹೊನ್ನೆಕೇರಿಯ ದೇವಸ್ಥಾನದ ಹತ್ತಿರದ ನಿತ್ಯಾನಂದ ಶೆಟ್ಟಿ ಎಂಬರ ಮನೆಯಲ್ಲಿ ಈ ಅಘವಡ ನಡೆದಿದ್ದು, ಮನೆಯ ಒಳಗಿನಿಂದ ಹೊಗೆ ಬರುವುದನ್ನು ವಿಕ್ಷಿಸಿದ ಪಕ್ಕದ ನಿವಾಸಿ ಪಿಡಿಓ ಗಿರೀಶ ಎನ್. ನಾಯಕ ಮತ್ತು ಸುನೀಲ ನಾಯ್ಕ ಅವರು ಅಗ್ನಿಶ್ಯಾಮಕ ಠಾಣೆಗೆ ಮಾಹಿತಿ ನೀಡಿದರು. ತಕ್ಷಣ ಅಗ್ನಿಶಾಮಕ ದಳ ದವರು ಆಗಮಿಸಿ ಮನೆಯೊಳಗೆ ಪ್ರವೇಶಿಸಿ ಬೆಂಕಿಯನ್ನು ನಂದಿಸಿ, ಗ್ಯಾಸ್ ಸಿಲೆಂಡರ್ ಸ್ಪೋಟ್ ಆಗದಂತೆ ನೋಡಿಕೊಂಡು, ದೊಡ್ಡ ಪ್ರಮಾಣದಲ್ಲಿ ಸಂಭವಿಸುವ ಹಾನಿಯನ್ನು ತಪ್ಪಿಸಿದ್ದಾರೆ.

ಅಗ್ನಿಶಾಮಕ ದಳದ ಪ್ರಭಾರ ಅಧಿಕಾರಿ ಗಜಾನನ ವಿ.ನಾಯ್ಕ, ಚಾಲಕ ತಂತ್ರಜ್ಞಾನ ಗಣೇಶ ಯು.ನಾಯ್ಕ, ಅಗ್ನಿಶಾಮಕರಾದ ಗಣೇಶ ಆರ್. ಶೇಟ, ಹರ್ಷ ನಾಯಕ, ಗಣರಾಜ್ ಎಚ್.ನಾಯಕ, ಮಂಜುನಾಥ ನಾಯ್ಕ, ಮಂಗಲದಾಸ ನಾಯ್ಕ ಕರ್ತವ್ಯ ನಿರ್ವಹಿಸಿದರು.