ಡೈಲಿ ವಾರ್ತೆ:12 ಮಾರ್ಚ್ 2023

ಪಂಚವರ್ಣ ಸಂಸ್ಥೆಯ ರೈತರೆಡೆಗೆ 23ನೇ ಮಾಲಿಕೆ ಸನ್ಮಾನ ಕಾರ್ಯಕ್ರಮ: ಉಪ್ಲಾಡಿ- ಕೃಷಿಯಿಂದ ವಿಮುಖರಾದರೆ ಆಪತ್ತು
ತಪ್ಪಿದಲ್ಲ- ಯುವ ಕೃಷಿಕ ಸುರೇಶ್ ಪೂಜಾರಿ

ಕೋಟ: ಕೃಷಿಯಿಂದ ವಿಮುಖರಾದರೆ ದೇಶಕ್ಕೆ ಆಪತ್ತು ತಪ್ಪಿದಲ್ಲ ಈ ದಿಸೆಯಲ್ಲಿ ಹೆಚ್ಚು ಹೆಚ್ಚು ಯುವಕರು ಕೃಷಿಯಲ್ಲಿ
ತೋಡಗಿಕೊಳ್ಳಬೇಕು ಎಂದು ಯುವ ಕೃಷಿಕ ಉಪ್ಲಾಡಿ ಸುರೇಶ್ ಪೂಜಾರಿ ಹೇಳಿದರು. ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ
ಮಹಿಳಾ ಮಂಡಲ ನೇತ್ರತ್ವದಲ್ಲಿ ಗೆಳೆಯರ ಬಳಗ ಕಾರ್ಕಡ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಡುಕರೆ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 23ನೇ ಸರಣಿ
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಪ್ರಸ್ತುತ ಎಲ್ಲರೂ ವಿದ್ಯಾಭ್ಯಾಸ ಪಡೆಯಲಿ ಆದರೆ ಅದರ ನಂತರ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ವಹಿಸಿಸುವುದು ಅಗತ್ಯವಾಗಿದೆ. ಭೂಮಿಯನ್ನು ಯಾವುದೇ ಕಾರಣಕ್ಕೂ ಹಡಿಲು ಬಿಡಬೇಡಿ ಅದರಲ್ಲಿ ಕೃಷಿ ಮಾಡಿ ಪ್ರತಿಯೊಂದು ಕ್ಷೇತದಲ್ಲೂ ಸೋಲು
ಗೆಲುವ ಸಹಜ ಆದರೆ ಕೃಷಿ ಲಾಭದಾಯಕ ಅಲ್ಲ ಎನ್ನುವ ಮಾತನ್ನು ಈ ಸಂದರ್ಭದಲ್ಲಿ ಅಲ್ಲಗೆಳೆದ ಅವರು ಕೃಷಿಗೆ ಸರಕಾರ ಇನ್ನಷ್ಟು ಉತ್ತೇಜನ ನೀಡಿ ಯುವ ಸಮೂಹವನ್ನು ಕೃಷಿ ಕ್ಷೇತ್ರಕ್ಕೆಆಕರ್ಷಿಸಲು ಹೊಸ ಹೊಸ ಯೋಜನೆಗಳನ್ನು
ಸಿದ್ಧಪಡಿಸಿ ಎಂದು ಸರಕಾರವನ್ನು ಒತ್ತಾಯಿಸಿ ಪಂಚವರ್ಣ ಸೇರಿದಂತೆ ವಿವಿಧ ಸಂಘಟನೆಗಳು ರೈತರ ಮನೆ ಬಾಗಿಲಿಗೆ ತೆರಳಿ ಗೌರವಿಸುವ ಕಾರ್ಯಕ್ರಮ ನಿಜಕ್ಕೂ ರೈತ ಸಮುದಾಯಕ್ಕೆ ಇನ್ನಷ್ಟು ಪ್ರೇರಣೆಯನ್ನು ನೀಡಿದಂತೆ ಎಂದು ಸಂಘಸಂಸ್ಥೆಗಳ ಕಾರ್ಯಕ್ರಮವನ್ನು ಕೊಂಡಾಡಿದರು.


ಈ ಸಂದರ್ಭದಲ್ಲಿ ಕೃಷಿ ಪರಿಕರಗಳನ್ನು ನೀಡಿ ಸುರೇಶ್ ಪೂಜಾರಿಯವರನ್ನು ಗೌರವಿ ಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ವಡ್ಡರ್ಸೆ ಗ್ರಾಮಪಂಚಾಯತ್ ಸದಸ್ಯರಾದ ಕೋಟಿ ಪೂಜಾರಿ,ತೀರ್ಥೆಶ್ ,ಕೋಟ ಗ್ರಾ.ಪಂ ಘನತ್ಯಾಜ್ಯ ಘಟಕದ ಮುಖ್ಯಸ್ಥೆ ಲೋಲಾಕ್ಷಿ
ಕೋತ್ವಾಲ್, ಮೂಲ್ಕಿ ನಗರಸಭೆಯ ಮುಖ್ಯಾಧಿಕಾರಿ ಚಂದ್ರ ಪೂಜಾರಿ,ಸಾಲಿಗ್ರಾಮ ಪ. ಪಂ ಸದಸ್ಯ ಪುನಿತ್ ಪೂಜಾರಿ,ಸಂಯಯಕ್ತ ಸಂಘಟನೆಗಳ ಸಂಯೋಜಕ ಸತ್ಯನಾರಾಯಣ ಆಚಾರ್ಯ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಡುಕರೆ ಅಧ್ಯಕ್ಷ ಶಶಿಧರ ತಿಂಗಳಾಯ,
ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ
ಕಲಾವತಿ ಅಶೋಕ್ ಉಪಸ್ಥಿತರಿದ್ದರು.

ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಸ್ವಾಗತಿಸು ಪ್ರಾಸ್ತಾವನೆ ಸಲ್ಲಿಸಿದರು.ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಶಕೀಲ ಪೂಜಾರಿ ಸನ್ಮಾನಪತ್ರವನ್ನು ವಾಚಿಸಿದರು.
ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕ ರವೀಂದ್ರ ಕೋಟ ವಂದಿಸಿದರು.