ಡೈಲಿ ವಾರ್ತೆ:12 ಮಾರ್ಚ್ 2023

ಪೆರ್ನೆ ನದಿಯಲ್ಲಿ ಮುಳುಗಿ ಬಾಲಕ ಮೃತ್ಯು

ಮಾಣಿ: ಮಾಣಿ ನಿವಾಸಿ ಬಾಲಕ ಪೆರ್ನೆ ನೇತ್ರಾವತಿ ಬಿಳಿಯೂರು ಬಳಿ ನೀರುಪಾಲಾದ ಘಟನೆ ನಡೆದಿದೆ.
ತ್ವಾಹಿರ್ ಅವರ ಪುತ್ರ ಸಲ್ಮಾನ್(16) ಮೃತ ಬಾಲಕ.
ಈತ ಮನೆಯಿಂದ ಟ್ಯೂಷನ್ ಗೆ ತೆರಳಿದ್ದು, ಅಲ್ಲಿಂದ ಗೆಳೆಯನ ಜೊತೆ ಪೆರ್ನೆ ನದಿಗೆ ತೆರಳಿದ್ದು,ನದಿಗಿಳಿದಾಗ ಸಲ್ಮಾನ್ ನೀರುಪಾಲಾಗಿದ್ದಾನೆ. ಬಳಿಕ ಊರವರು ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನೋರ್ವ ಬಾಲಕನ ರಕ್ಷಣೆ ಮಾಡಲಾಗಿದೆ.
ಮಾಣಿ ನಿವಾಸಿಯಾಗಿರುವ ಸಲ್ಮಾನ್ ಅವರ ತಂದೆ ಇತ್ತೀಚೆಗೆ ಮೃತಪಟ್ಟಿದ್ದಾರೆ. ಇದೀಗ ಸಲ್ಮಾನ್ ನಿಧನದಿಂದ ಕುಟುಂಬದ ರೋಧನ ಮುಗಿಲು ಮುಟ್ಟಿದೆ.