ಡೈಲಿ ವಾರ್ತೆ:27 ಏಪ್ರಿಲ್ 2023

ಎ. 28 ರಂದು ಮಂದಾರ್ತಿಯಲ್ಲಿ ದಿನಕರ ಕುಂದರ್‌ ನಡೂರು ಇವರ ಯಕ್ಷ ತಿರುಗಾಟದ ರಜತ ಸಂಭ್ರಮ

ಬ್ರಹ್ಮಾವರ:ದಿನಕರ ಕುಂದರ್‌ ನಡೂರು ಇವರ ಯಕ್ಷ ತಿರುಗಾಟದ ರಜತ ಸಂಭ್ರಮ ಕಾರ್ಯಕ್ರಮವು ಎ. 28 ರಂದು ಶುಕ್ರವಾರ ಸಂಜೆ 6 ಘಂಟೆಗೆ ಮಂದಾರ್ತಿ ರಥಬೀದಿಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ನಾಡೋಜ ಡಾ. ಜಿ. ಶಂಕರ್ ಉದ್ಘಾಟಿಸಲಿದ್ದಾರೆ.
ರಜತ ಗೆಜ್ಜೆ ಪ್ರಧಾನವನ್ನು ಶ್ರೀ ಕ್ಷೇತ್ರ ಮಂದಾರ್ತಿಯ ಅಧ್ಯಕ್ಷ ಅನುವಂಶಿಕ ಮೊಕ್ತಸರರಾದ ಧನಂಜಯ ಶೆಟ್ಟಿ ವಹಿಸಲಿದ್ದು.
ಶೇಡಿಕೊಡ್ಲು ವಿಠಲ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಆನಂದ ಸಿ. ಕುಂದರ್, ಡಾ. ತಲ್ಲೂರು ಶಿವರಾಂ ಶೆಟ್ಟಿ, ಕೃಷ್ಣಮೂರ್ತಿ ಮಂಜರು, ಎಸ್. ಸಿ. ಕೊಟ್ಟಾರಗಸ್ತಿ, ಕೀರ್ತಿ ಕುಮಾರಿ, ಸುರೇಶ್ ಭಂಡಾರಿ ಕಡಂದಲೆ, ಡಾ. ನಾಗೇಶ್, ಸುಗ್ಗಿ ಸುಧಾಕರ್ ಶೆಟ್ಟಿ, ರಾಜು ವಿ ಮೆಂಡನ್, ಪಟ್ಲ ಸತೀಶ್ ಶೆಟ್ಟಿ, ರಾಜೇಂದ್ರ ವಿ. ಶೆಟ್ಟಿ, ಧನಂಜಯ ಅಮೀನ್, ಗಣೇಶ್ ಪ್ರಸಾದ್ ಕಾಂಚನ್ ಇವರ ಉಪಸ್ಥಿತಿಯಲ್ಲಿ
ರಜತ ಸಂಭ್ರಮ ಹಾಗೂ ನೆನಪಿನ ಬುತ್ತಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ರಾತ್ರಿ 7:30 ರಿಂದ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಪಾವಂಜೆ ಮೇಳದವರಿಂದ “ನಾಗ ಸಂಜೀವಿನಿ” ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ಪ್ರಕಟಿಸಿದ್ದಾರೆ. ಕಾರ್ಯಕ್ರಮದ ನೇರ ಪ್ರಸಾರವನ್ನು ಸ್ಮೈಲ್ ಟಿವಿ ಕನ್ನಡ ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದು