ಡೈಲಿ ವಾರ್ತೆ:30 ಏಪ್ರಿಲ್ 2023

ಹುಬ್ಬಳ್ಳಿ ಭೀಕರ ಕಾರು ಅಪಘಾತ: ಕರ್ತವ್ಯ ನಿರತ ಪಿಎಸ್ಐ ಸ್ಥಳದಲ್ಲೇ ಸಾವು!


ಹುಬ್ಬಳ್ಳಿ: ಭೀಕರ ಅಪಘಾತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ ಎಸ್ ಐ ಓರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಹುಬ್ಬಳ್ಳಿಯ ಕಿರೇಸೂರು ಗ್ರಾಮದ ಬಳಿ ನಡೆದಿದೆ.

ಮಲ್ಲಿಕಾರ್ಜುನ ಕುಲಕರ್ಣಿ (40) ಮೃತ ಪಿಎಸ್ ಐ. ಮಲ್ಲಿಕಾರ್ಜುನ ಅವರು ಅಮೀನಗಢ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮಲ್ಲಿಕಾರ್ಜುನ ಕುಲಕರ್ಣಿ ಚಲಿಸುತ್ತಿದ್ದ ಕಾರು ಹುಬ್ಬಳ್ಳಿಯ ಕಿರೇಸೂರ ಗ್ರಾಮದ ಬಳಿ ಬರುತಿದ್ದಂತೆ ನಿಯಂತ್ರಣ ತಪ್ಪಿ ಸೇತುವೆ ಡಿಕ್ಕಿ ಹೊಡೆದಿದೆ. ಅಪಘತದ ಭೀಕರತೆಗೆ ಕಾರಿನಲ್ಲಿದ್ದ ಪಿಎಸ್ ಐ ಮಲ್ಲಿಕಾರ್ಜುನ ಕುಲಕರ್ಣಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಸ್ಥಳಕ್ಕೆ ನವಲಗುಂದ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.