ಡೈಲಿ ವಾರ್ತೆ:07 ಮೇ 2023

ಬಿಜೆಪಿ ಸಮಾವೇಶಕ್ಕೆ ಬಂದು ವಾಪಾಸ್ಸು ಹೋಗುವಾಗ ಕ್ರೂಸರ್ ವಾಹನ ಪಲ್ಟಿ – ಯುವಕ ಮೃತ್ಯು!

ಚಿಕ್ಕೋಡಿ; ಬಿಜೆಪಿ ಸಮಾವೇಶಕ್ಕೆ ಬಂದು ವಾಪಸ್ ಹೋಗುವಾಗ ಭೀಕರ ಅಪಘಾತ ಸಂಭವಿಸಿ, ಓರ್ವ ಸಾವನ್ನಪ್ಪಿ 7 ಮಂದಿ ಗಾಯಗೊಂಡ ಘಟನೆ ಕೊಟ್ಟಲಗಿ- ಕಕಮರಿ ಮಾರ್ಗ ಮಧ್ಯದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಕೊಟ್ಟಲಗಿ ಗ್ರಾಮದ ಶಿವಪುತ್ರ ರಾಮು ಬಂಡರಬಟ್ಟಿ (20) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ನಿನ್ನೆ ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಪ್ರಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಿದ್ದರು. ಈ ಕಾರ್ಯಕ್ರಮವನ್ನು ಮುಗಿಸಿಕೊಂಡು ಮನೆಗೆ ಹೋಗುವಾಗ ಅಪಘಾತ ಸಂಭವಿಸಿದೆ.

ಕ್ರೂಸರ್‌ನಲ್ಲಿ ಅಥಣಿಯಿಂದ ಕೊಟ್ಟಲಗಿ ತೆರಳುವಾಗ ಅಪಘಾತ ಆಗಿದೆ. ಕ್ರೂಸರ್ ಪಲ್ಟಿಯಾಗಿ ಶಿವಪುತ್ರ ರಾಮು ಬಂಡರಬಟ್ಟಿ ಸಾವನ್ನಪ್ಪಿದ್ದಾನೆ.

ಬಸು ಸಿದ್ದಪ್ಪ ಗುಂಡಗೇರಿ, ದುಂಡಪ್ಪ ಗುಂಡಗೇರಿ, ರಾಜು ಸಿದ್ದರಾಯ ಬಂಡರಬೇಟಿ, ಅಭಿಷೇಕ ಸಿಂಧೂರ ಅವರುಗಳು ಗಾಯಗೊಂಡಿದ್ದು, ಅವರನ್ನು ಅಥಣಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.