ಡೈಲಿ ವಾರ್ತೆ:07 ಮೇ 2023

ಮದ್ದೂರು:ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗರ ಮನೆಗೆ ಚುನಾವಣಾಧಿಕಾರಿಗಳ ದಾಳಿ – 2 ಕೋಟಿ ಅಧಿಕ ಹಣ ವಶಕ್ಕೆ

ಮಂಡ್ಯ: ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಉದಯ ಬೆಂಬಲಿಗರ ಮನೆಯಿಂದ ಚುನಾವಣಾಧಿಕಾರಿಗಳು 2 ಕೋಟಿ 3 ಲಕ್ಷದ 50 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಉದಯ್ ಬೆಂಬಲಿಗರಾದ ಮದ್ದೂರಿನ ಸುರೇಶ್‌ಬಾಬು ಮತ್ತು ರಮೇಶ್ ಎಂಬುವರ ಮನೆಗಳ ಮೇಲೆ ರವಿವಾರ ಬೆಳ್ಳಂಬೆಳಗ್ಗೆ ಚುನಾವಣಾಧಿಕಾರಿಗಳು ದಾಳಿ ನಡೆಸಿದಾಗ ಹಣ ಪತ್ತೆಯಾಗಿದೆ.

ಸುರೇಶ್‌ಬಾಬು ಮನೆಯಲ್ಲಿ 2 ಕೋಟಿ ರೂ. ಹಾಗೂ ರಮೇಶ್ ಮನೆಯಲ್ಲಿ 3.50 ಲಕ್ಷ ರೂ. ಪತ್ತೆಯಾಗಿದ್ದು, ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ನರಸಿಂಹಮೂರ್ತಿ ತಿಳಿಸಿದ್ದಾರೆ.

ಸುರೇಶ್‌ಬಾಬುವನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.