ಡೈಲಿ ವಾರ್ತೆ:08 ಮೇ 2023

ಭಟ್ಕಳ: ಬೈಕ್ ಗೆ ಕಾರು ಢಿಕ್ಕಿ ಯುವಕ ಮೃತ್ಯು, ಇನ್ನೋರ್ವನಿಗೆ ಗಾಯ

ಭಟ್ಕಳ:ಬೈಕ್ ಮತ್ತು ಕಾರಿನ‌ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಭಟ್ಕಳದ ಸಾಗರಸ್ತೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಭಟ್ಕಳದ ಉಸ್ಮನಿಯ ಕಾಲನಿ ನಿವಾಸಿ ಹಿಸಾಮುದ್ದೀನ್ ಶರೀಫ್ (30) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಬೈಕ್ ನ ಹಿಂಬದಿ ಸವಾರ ಮೊಹಮ್ಮದ್ ಕುತುಬ್ (20) ಗಾಯಗಳಾಗಿದೆ. ಅವರನ್ನು ಕುಂದಾಪುರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಆರು ಜನ ಸ್ನೇಹಿತರು 3 ಬೈಕ್ ಗಳಲ್ಲಿ ಸಾಗರ ರಸ್ತೆಯ ಕಡೆ ತೆರಳುವಾಗ ಕುಂದಾಪುರ ನಂಬರ್ ಪ್ಲೇಟ್ ಇರುವ ಟೂರಿಸ್ಟ್ ಕಾರು ಬೈಕ್ ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.