ಡೈಲಿ ವಾರ್ತೆ:18 ಮೇ 2023

ದಕ್ಷಿಣ ಕನ್ನಡ: ನೇತ್ರಾವತಿ ನದಿಗೆ ಹಾರಿ ಯುವಕ ನಾಪತ್ತೆ – ಮುಳುಗು ತಜ್ಞರಿಂದ ಹುಡುಕಾಟ

ಬಂಟ್ವಾಳ:ನೇತ್ರಾವತಿ ನದಿಗೆ ಯುವಕನೋರ್ವ ಹಾರಿದ ಘಟನೆ ನಡೆದಿದ್ದು, ಈತನಿಗೆ ಹುಡುಕಾಟ ನಡೆಯುತ್ತಿದೆ

ನೆಟ್ಲ ನಿವಾಸಿ ಪ್ರವೀಣ್ ನೇತ್ರಾವತಿ ನದಿಗೆ ಹಾರಿದ ವ್ಯಕ್ತಿ ಎಂದು ಹೇಳಲಾಗುತ್ತಿದೆ.
ಮ್ಯಾಕನಿಕ್ ಕೆಲಸ ಮಾಡುತ್ತಿದ್ದ ಇವರು ಕಳೆದ ಎರಡು ದಿನಗಳಿಂದ ಕೆಲಸಕ್ಕೆ ಹೋಗದ ತಿರುಗಾಡುತ್ತಿದ್ದರು ಎನ್ನಲಾಗಿದೆ.

ಇವರು ನದಿಗೆ ಹಾರುವ ಕೆಲ ಗಂಟೆಗಳ ಮೊದಲು ವ್ಯಾಟ್ಸ್ ಆಪ್ ಗ್ರೂಪ್ ನಲ್ಲಿ ಸಾಯುತ್ತೆನೆಂದು ಮೆಸೇಜ್ ಕೂಡ ಮಾಡಿದ್ದಾರೆ ಎಂದು ಹೇಳಲಾಗಿದೆ.

ಬೈಕಿನಲ್ಲಿ ಬಂದ ಇವರು ನೇತ್ರಾವತಿ ಹೊಸ ಸೇತುವೆ ಮೇಲೆ ಬೈಕ್ ನಿಲ್ಲಿಸಿ ಚಪ್ಪಲಿ ಅಲ್ಲೆ ಇಟ್ಟು ಹಾರಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದ್ದಾರೆ.
ಸ್ಥಳದಲ್ಲಿ ಮುಳುಗುತಜ್ಞರು ಹುಡುಕುತ್ತಿದ್ದು, ಬಂಟ್ವಾಳ ‌ನಗರ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ