ಡೈಲಿ ವಾರ್ತೆ: 6 ಜುಲೈ 2023

ತೆಕ್ಕಟ್ಟೆ ಗ್ರಾಮದ ಕುದ್ರು ಮನೆ ಪರಿಸರದಲ್ಲಿ ನೆರೆ:ಅಪಾಯದಲ್ಲಿದ್ದ ಕುಟುಂಬವನ್ನು ಸ್ಥಳಾಂತರಿಸಿದ ಅಗ್ನಿ ಶಾಮಕದಳ ಸಿಬ್ಬಂದಿಗಳು

ಕೋಟ:ಉಡುಪಿ ಜಿಲ್ಲೆಯಲ್ಲಿ ನಿಲ್ಲದ ವರುಣನ ಆರ್ಭಟದಿಂದ ತೆಕ್ಕಟ್ಟೆ ಗ್ರಾಮದ ಕುದ್ರುಮನೆ ಪರಿಸರದಲ್ಲಿ ನೆರೆ ನೀರು ಹಲವು ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗಿದ್ದು ಅಪಾಯದಲ್ಲಿದ್ದ ಕುಟುಂಬವನ್ನು ಕೊಡಲೇ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಈ ಸಂದರ್ಭದಲ್ಲಿ ಕುಂದಾಪುರ ಅಗ್ನಿ ಶಾಮಕದಳದ ಸಿಬ್ಬಂದಿಗಳು, ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್, ಗ್ರಾಮ ಲೆಕ್ಕಾಧಿಕಾರಿಣಿ ದೀಪಾ, ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಸದಸ್ಯರಾದ ಸುರೇಶ್ ಶೆಟ್ಟಿ, ಸತೀಶ್ ದೇವಾಡಿಗ ಸಹಕರಿಸಿದರು.