ಡೈಲಿ ವಾರ್ತೆ:14 ಜುಲೈ 2023

ಆನ್ ಲೈನ್ ಕಿರುಕುಳಕ್ಕೆ ಕುಟುಂಬ ಬಲಿ – ಇಬ್ಬರು ಮಕ್ಕಳಿಗೆ ವಿಷವುಣಿಸಿ ದಂಪತಿ ಆತ್ಮಹತ್ಯೆಗೆ ಶರಣು!

ಮಧ್ಯಪ್ರದೇಶ;ಭೋಪಾಲ್‌ ನಲ್ಲಿ ಮಕ್ಕಳಿಗೆ ವಿಷವುಣಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿರುವುದು ವರದಿಯಾಗಿದೆ.

ಮೃತರನ್ನು ಭೂಪೇಂದ್ರ ವಿಶ್ವಕರ್ಮ (38), ಅವರ ಪತ್ನಿ ರಿತು (35) ಮತ್ತು ಇಬ್ಬರು ಮಕ್ಕಳಾದ ರಿತುರಾಜ್ (3) ಮತ್ತು ರಿಷಿರಾಜ್ (9) ಎಂದು ಗುರುತಿಸಲಾಗಿದೆ. ಭೂಪೇಂದ್ರ ಆತ್ಮಹತ್ಯೆಗೂ ಮುನ್ನ ಈ ಮೇಲಿನ ಚಿತ್ರವನ್ನು ತೆಗೆದಿದ್ದು,’ನಮ್ಮ ಕೊನೆಯ ಕುಟುಂಬದ ಚಿತ್ರ’ ಎಂದು ಉಲ್ಲೇಖಿಸಿದ್ದಾರೆ.

ನಗರದ ನೀಲ್ಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸ್ಥಳದಿಂದ ಆತ್ಮಹತ್ಯೆ ಪತ್ರ ಮತ್ತು ಸಲ್ಫೇಟ್ ಮಾತ್ರೆಗಳ ಪ್ಯಾಕೆಟ್ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೃತ ದಂಪತಿ ಖಾಸಗಿ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಮೃತ ಮಕ್ಕಳು 8 ಮತ್ತು 3 ವರ್ಷ ವಯಸ್ಸಿನವರು ಎಂದು ಎಸ್ಪಿ ಚಂದ್ರಪ್ರಕಾಶ್ ಪಾಂಡೆ ಅವರು ಹೇಳಿದ್ದಾರೆ.

ಕೆಲವು ತಿಂಗಳ ಹಿಂದೆ ಆನ್‌ಲೈನ್ ಅರೆಕಾಲಿಕ ಕೆಲಸದ ಕುರಿತು ವಾಟ್ಸಾಪ್‌ನಲ್ಲಿ ಸಂದೇಶ ಬಂದಿತ್ತು. ಅವನಿಗೆ ಹಣದ ಅವಶ್ಯಕತೆ ಇತ್ತು, ಆದ್ದರಿಂದ ಅವನು ಕೆಲಸ ಮಾಡಲು ಪ್ರಾರಂಭಿಸಿದನು.

ಆನ್ ಲೈನ್ ಕಂಪೆನಿಯವರು ಅವರು ಅವನ ಲ್ಯಾಪ್‌ಟಾಪ್ ಅನ್ನು ಹ್ಯಾಕ್ ಮಾಡಿದ್ದಾರೆ. ಮತ್ತು ತಮ್ಮ ಮಾರ್ಫ್ ಮಾಡಿದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕಂಪನಿಯು ಅವರ ಬ್ಯಾಂಕ್ ಖಾತೆಗಳನ್ನು ಲೂಟಿ ಮಾಡಿದೆ ಎಂದು ಆರೋಪಿಸಲಾಗಿದೆ.