ಡೈಲಿ ವಾರ್ತೆ:27 ಜುಲೈ 2023

ಗಾವಳಿ – ಕಕ್ಕುಂಜೆಯಲ್ಲಿ ಬಾರಿ ಮಳೆಯಿಂದಾಗಿ ತೊಡಿಗೆ ಬಿದ್ದು ಮೃತಪಟ್ಟ ವ್ಯಕ್ತಿಯ ಪತ್ನಿಗೆ ಸರಕಾರ ವಿಪತ್ತು ನಿಧಿಯಿಂದ 5 ಲಕ್ಷ ಚೆಕ್ ನ್ನು ಹಸ್ತಾಂತರಿಸಿದ ಶಾಸಕ ಕಿರಣ್ ಕೊಡ್ಗಿ

ಕುಂದಾಪುರ:ತಾಲೂಕಿನ ಗಾವಳಿ – ಕಕ್ಕುಂಜೆ ರಸ್ತೆಯ ಮಕ್ಕಿಮನೆ ಸಮೀಪ ವೀಪರಿತ ಮಳೆಯಿಂದ ತೋಡಿಗೆ ಬಿದ್ದು ಮೃತಪಟ್ಟ ಹರ್ಕಾಡಿ ನಿವಾಸಿ ಗೋಕುಲದಾಸ್ ಪ್ರಭು (54) ಇವರ ಪತ್ನಿಗೆ ಸರಕಾರ ವಿಪತ್ತು ನಿಧಿಯಿಂದ ಮಂಜೂರದ 5 ಲಕ್ಷ ರೂ.ಚೆಕ್ ನ್ನು ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರರಾದ ಶೋಭಲಕ್ಷ್ಮಿ, R. I.ದಿನೇಶ್ ಹುದ್ದರ,V. A ಅನಿಲ್ ಕುಮಾರ್ ಶೆಟ್ಟಿ, ಸಹಾಯಕ ರಘುರಾಮ್ ಅಲ್ಲದೆ ಹಿರಿಯರಾದ ನಾರಾಯಣ ಶೆಣೈ ಗಾವಳಿ, ಶ್ರೀಧರ್ ಶೆಟ್ಟಿ ಬಿದ್ಕಲಕಟ್ಟೆ, ಮಧುವನ ಮಾಧವ ಹೆಗ್ಡೆ, ಶ್ರೀಮತಿ ಭಾಗೀರಥಿ ಪ್ರಭು, ಗ್ರಾಂ. ಪಂ. ಅಧ್ಯಕ್ಷರು ಜಗನ್ನಾಥ ಶೆಟ್ಟಿ, ಬಾಲಕೃಷ್ಣ ಹೆಗ್ಡೆ ನರಾಡಿ, ನಾಗೇಶ್ ಪಡಿಯಾರ ಗಾವಳಿ, ಶಂಕರ ಮೊಗವೀರ ಮತ್ಯಾಡಿ, ಉದ್ಯಮಿ ಮಹೇಶ್ ಶೆಣೈ ಗಾವಳಿ, ಕೇಶವ್ ಪ್ರಭು ಗಾವಳಿ, ಉದ್ಭವ್ ಕುಮಾರ್ ಶೆಟ್ಟಿ, ಪ್ರಶಾಂತ್ ಕಕ್ಕುಂಜೆ, ಗ್ರಾಂ. ಪಂ. ಸದಸ್ಯರಾದ ಗಣೇಶ್ ಶೆಟ್ಟಿ ಕೊಳನಕಲ್, ಜಯಪ್ರಕಾಶ್ ಶೆಟ್ಟಿ ಚಿಟ್ಟಿಬೈಲು, ಮಾಜಿ ಸದಸ್ಯರಾದ ವಸಂತಿ ಶೆಟ್ಟಿ ಹರ್ಕಾಡಿ ಇತರರು ಉಪಸ್ಥಿತರಿದ್ದರು.