ಡೈಲಿ ವಾರ್ತೆ:27 ಜುಲೈ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ತಾಳಗುಪ್ಪ:ಮಹಿಳೆಯೋರ್ವರು ಎಮ್ಮೆ ಹುಡುಕಲು ಹೋಗಿ ನೆರೆ ನೀರಿಗೆ ಆಕಸ್ಮಿಕ ಬಿದ್ದು ಮೃತ್ಯು – ಶಿಕ್ಷಣ ಸಚಿವ ಭೇಟಿ, ನೊಂದ ಕುಟುಂಬಕ್ಕೆ ವೈಯಕ್ತಿಕ ಧನ ಸಹಾಯ

ತಾಳಗುಪ್ಪ:ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರ ತಾಳಗುಪ್ಪ ಹೋಬಳಿಯ ಕಾನ್ಲೆ ಗ್ರಾಮ ಪಂಚಾಯಿತಿಯ ಕೆಲುವೆ ವಾಸಿ ಲಕ್ಷ್ಮಮ್ಮ (61) ಮೃತ ಮಹಿಳೆ.
ಇವರು ವಿಧವಾ ಮಹಿಳೆಯಾಗಿದ್ದೂ ಸಣ್ಣ ಹಿಡುವಳಿ ರೈತರಾಗಿದ್ದಾರೆ. ಓರ್ವ ಮಗ ಮಾತ್ರಾ ಹೊಂದಿದ್ದಾರೆ.

ಮೃತ ಲಕ್ಷ್ಮಮ್ಮ ಮನೆಗೆ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರೂ ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರು ಭೇಟಿ ನೀಡಿ, ನೊಂದ ಕುಟುಂಬಕ್ಕೆ ಸಾಂತ್ವನ ತಿಳಿಸಿ, ವೈಯಕ್ತಿಕ ನೆರವು ನೀಡಿದರು. ಶಿಕ್ಷಣ ಸಚಿವರ ಜೊತೆಯಿಲ್ಲಿದ್ದ ಸಾಗರ ತಹಸೀಲ್ದಾರ್ ಮಲ್ಲೇಶ್ ಪೂಜಾರ್ ಮಾತನಾಡಿ ರೈತ ಮಹಿಳೆ ಲಕ್ಷಮ್ಮ ಸಾವಿನ ಕುರಿತಂತೆ ವೈದ್ಯಕೀಯ ವರದಿ ಬಂದ ಕೂಡಲೇ ರಾಷ್ಟ್ರೀಯ ವಿಪತ್ತು ನಿಧಿಯಿಂದ 04 ಲಕ್ಷ ಪರಿಹಾರದ ಮೊತ್ತದ ಚೆಕ್ ನ್ನೂ ನೊಂದ ಕುಟುಂಬಸ್ಥರಿಗೆ ನೀಡುವಂತೆ ತಿಳಿಸಿದರು.