ಡೈಲಿ ವಾರ್ತೆ: 30/Sep/2023

ವರದಿ: ಅಬ್ದುಲ್ ರಶೀದ್ ಮಣಿಪಾಲ

ಮಣಿಪಾಲ: ಪ್ರಾಮಾಣಿಕತೆ ತೋರಿದ ಆಟೋ ಚಾಲಕ ಮದಗದ ಸಂಜೀವ ಪೂಜಾರಿ

ಮಣಿಪಾಲ: ಅದೆಷ್ಟೋ ಪ್ರಯಾಣಿಕರು ಆಟೋ ರಿಕ್ಷಾಗಳಲ್ಲಿ ತಮ್ಮ ಅಮೂಲ್ಯವಾದ ಬೆಲೆ ಬಾಳುವ ವಸ್ತುಗಳನ್ನು ಮರೆತು ಬಿಟ್ಟುಹೋಗಿದ್ದು ಅದನ್ನು ಆಟೋ ಚಾಲಕರು ಪ್ರಾಮಾಣಿಕತೆಯಿಂದ ವಾರಸುದಾರರಿಗೆ ಮರಳಿಸಿದ ಘಟನೆಗಳು ಮಣಿಪಾಲ ಆಟೋ ನಿಲ್ದಾಣದಲ್ಲಿ ಸಾಕಷ್ಟಿವೆ.

ಅದೇ ರೀತಿ ಸೆ. 29 ರಂದು ಮಣಿಪಾಲ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರು ಇಂಟೆರ್ನ್ಯಾಷನಲ್ ಹಾಸ್ಟೆಲ್ನಿಂದ ಮಣಿಪಾಲದ ಶಿರ್ಡಿ ಹಾಸ್ಪಿಟಲ್ ಗೆ ಮಣಿಪಾಲ ಯೂನಿಯನ್ ಸೇರಿದ ಆಟೋ ರಿಕ್ಷಾದಲ್ಲಿ ಪ್ರಯಾಣಿಸುವಾಗ ಬೆಲೆ ಬಾಳುವ ಮೊಬೈಲ್ ನ್ನು ಮರೆತು ಬಿಟ್ಟಿದ್ದು ರಿಕ್ಷಾ ಚಾಲಕ ಮದಗದ ಸಂಜೀವ ಪೂಜಾರಿ ರಿಕ್ಷಾ ನಿಲ್ದಾಣ ಬಂದು ನೋಡಿದಾಗ ಮೊಬೈಲ್ ಇರೋದು ಗಮನಿಸಿ ಸಂಬಂಧ ಪಟ್ಟವರಿಗೆ ಪ್ರಾಮಾಣಿಕವಾಗಿ ವಾಪಾಸ್ ನೀಡಿರುತಾರೆ. ಇವರ ಪ್ರಾಮಾಣಿಕತೆಗೆ ಎಲ್ಲರೂ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.