ಡೈಲಿ ವಾರ್ತೆ: 09/OCT/2023

ಮೂಡುಗಿಳಿಯಾರು: ಅಯುಧ ಪೂಜೆಯ ಪ್ರಯುಕ್ತ ದಸರಾ ಕ್ರೀಡಾಕೂಟ

ಕೋಟ: ಅಯುಧ ಪೂಜೆಯ ಪ್ರಯುಕ್ತ ದಸರಾ ಕ್ರೀಡಾಕೂಟವನ್ನು ಪ್ರಾಥಮಿಕ ಸಮಿತಿ ಕೋಟ ವತಿಯಿಂದ ಹಿರಿಯ ಪ್ರಾಥಮಿಕ ಶಾಲೆ ಮೂಡು ಗಿಳಿಯಾರನಲ್ಲಿ ಮಾಡಲಾಯಿತು

ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರತಾಪ್ ಚಂದ್ರ ಶೆಟ್ಟಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋಟ ಇವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ದಿನೇಶ ಪುತ್ರನ್ ವಿಠಲವಾಡಿ ಪ್ರಾಥಮಿಕ ಸಮಿತಿ ಅಧ್ಯಕ್ಷರು,
ಅಭಿಲಾಶ್ ಸ್ಥಳಿಯ ಸಮಿತಿ ಅಧ್ಯಕ್ಷರು ಕುಂದಾಪುರ, ಶ್ರೀಕಾಂತ್ ಸಹಾಯಕ ಇಂಜಿನಿಯರ್ ತಾಂತ್ರಿಕ, ಪ್ರಶಾಂತ ಶೆಟ್ಟಿ ಕಾರ್ಯನಿರ್ವಾಹಕ ಇಂಜಿನಿಯರ್, ಸಂತೋಷ ಸಹಾಯಕ ಲೆಕ್ಕಧಿಕಾರಿ ಕೋಟ,ಶರಣಯ್ಯ ಹಿರೆಮಠ ಶಾಖಾಧಿಕಾರಿ ತಲ್ಲೂರು,ಸುಕುಮಾರ ಶೆಟ್ಟಿ ಮೇಲ್ವಿಚಾರಕರು ಸಾಸ್ತಾನ, ಉಮೇಶ ಮೇಲ್ವಿಚಾರಕರು ಶಿರಿಯಾರ,ಉಪಸ್ಥಿತರಿದ್ದರು. ಕಾರ್ಯವನ್ನು ಮಹೇಶ ಕೆ ಶಾಖಾಧಿಕಾರಿ ಸಾಸ್ತಾನ ನಿರೂಪಣೆ ಮಾಡಿದರು.