ಡೈಲಿ ವಾರ್ತೆ: 26/OCT/2023

ಮಿತ್ತೂರು : ಕೆ.ಜಿ.ಎನ್. ನಲ್ಲಿ ಕಲಾ ಮಹೋತ್ಸವ

ಬಂಟ್ವಾಳ : ದಾರುಲ್ ಇರ್ಶಾದ್ ಅಧೀನ ಸಂಸ್ಥೆಯಾದ ಕೆ.ಜಿ.ಎನ್. ದ‌ಅವಾ ಕಾಲೇಜು ಮಿತ್ತೂರು ಇದರ ವಿದ್ಯಾರ್ಥಿ ಸಂಘಟನೆ ಮುಈನುಸ್ಸುನ್ನಃ ಸ್ಟೂಡೆಂಟ್ ಅಸೋಸಿಯೇಶನ್ ಹಮ್ಮಿಕೊಂಡ ಮಾಸಿಕ ಕಲಾ ಮಹೋತ್ಸವ ಇತ್ತೀಚಿಗೆ ಕೆ.ಜಿ.ಎನ್ ಕ್ಯಾಂಪಸ್‌ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ದ‌ಅ್‌ವಾ ಕಾಲೇಜು ಪ್ರಾಂಶುಪಾಲ ಸಯ್ಯಿದ್ ಸ್ವಲಾಹುದ್ದೀನ್ ಅದನಿ, ಮುದರ್ರಿಸ್ ಅಬ್ದುಲ್ಲತೀಫ್ ಸ‌ಅದಿ, ಸಯ್ಯಿದ್ ಸ್ವಾಲಿಹ್, ಮುನವ್ವಿರ್ ಅದನಿ, ಮಶೂದ್ ಸಖಾಫಿ, ಹನೀಫ್ ಅಝ್‌ಹರಿ, ಅಬ್ದುರ್ರಹ್ಮಾನ್ ಅಮಾನಿ, ಇಸ್ಮಾಯಿಲ್ ರಾಶಿದ್ ಮುಈನಿ, ಸಿನಾನ್ ಮುಈನಿ ಹಾಗೂ ಸಿದ್ದೀಕ್ ಹಾಜಿ ಕಬಕ ಮತ್ತಿತರು ಭಾಗವಹಿಸಿದ್ದರು.

ವಿವಿಧ ಕಲಾ ಸ್ಪರ್ಧೆಯಲ್ಲಿ ಮುಝಮ್ಮಿಲ್ ನಾವುಂದ ನೇತೃತ್ವದ ಟೀಮ್ ಖಾಹಿರಾ ಪ್ರಶಸ್ತಿ ಪಡೆದುಕೊಂಡಿತು.

ಅಶ್ರಫ್ ನಾವೂರು ಸ್ವಾಗತಿಸಿ, ಅನ್ಸೀಫ್ ಮಂಚಿ ವಂದಿಸಿದರು. ಸಲಾಂ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿದರು.