ಡೈಲಿ ವಾರ್ತೆ: 05/NOV/2023

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್ಗೋಡು ಮೋಹನದಾಸ ಶೆಣೈ ರವರಿಗೆ ಭಾಗವತ ಕೊಕ್ಕರ್ಣೆ ಸದಾಶಿವ ಅಮೀನ್ ರವರ ಸ್ವಗ್ರಹದಲ್ಲಿ ಗೌರವಾರ್ಪಣೆ

ಕೊಕ್ಕರ್ಣೆ: ಈ ವರ್ಷದ ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆರ್ಗೋಡು ಮೋಹನದಾಸ ಶೆಣೈ ಯವರನ್ನು ಅವರ ಶಿಷ್ಯರಾದ ಶ್ರೀ ಮಂದರ್ತಿ ಮೇಳದ ಭಾಗವತರಾದ ಕೊಕ್ಕರ್ಣೆ ಸದಾಶಿವ ಅಮೀನ್ ರವರು ತನ್ನ ಸ್ವಗ್ರಹ *ಶಿವನಾಕ್ಷಿ* ಯಲ್ಲಿ ಊರಿನ ಗಣ್ಯರ ಸಮ್ಮುಖದಲ್ಲಿ ಗೌರವಾರ್ಪಣೆ ನೀಡಿದರು. ಅಲ್ಲದೆ ಈ ವರುಷದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉಪ್ಪುಂದ ನಾಗೇಂದ್ರ ರಾವ್ ರವರನ್ನು ಗೌರವಪೂರ್ವಕವಾಗಿ ಆಭಿನಂದಿಸಲಾಯಿತು.

ಈ ಸಂದರ್ಭ ಅಮೀನ್ ರವರ ಜೊತೆಯಲ್ಲಿ ಆವರ ಧರ್ಮಪತ್ನಿ ಮೀನಾಕ್ಷಿ ಹಾಗೂ ಸಹೋದರ ಕಲಾವಿದ ದಿನಕರ ಕುಂದರ್, ಶ್ರೀಮತಿ ರೇಖಾ ದಿನಕರ ಕುಂದರ್, ಕೊಕ್ಕರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಂತ್ ಪೂಜಾರಿ, ಅಶೋಕ್ ಕುಂದರ್, ಸರ್ಪು ಸದಾನಂದ ಪಾಟೀಲ್, ಆರೂರು ಶ್ರೀಧರ ಶೆಟ್ಟಿ, ಸಂಜೀವ ಪೂಜಾರಿ ಚೆಗರಿಬೆಟ್ಟು, ಶಂಕರ ಕಾಮತ್ ಕೊಕ್ಕರ್ಣೆ, ಆರೂರು ಪಂಚಾಯತ್ ಆಧ್ಯಕ್ಷ ಗುರುರಾಜ್ ಭಟ್, ಆರಗ ಉಮೇಶ್ ಪೂಜಾರಿ, ಶ್ರೀನಿವಾಸ ಪೂಜಾರಿ, ಚೆಗರಿಬೆಟ್ಟು, ಮತ್ತು ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿ(ರಿ) ನಡೂರು ಇದರ ಸರ್ವ ಕಲಾವಿದರು, ಸೂರಾಲು ದಿನೇಶ್ ದೇವಾಡಿಗ, ಶ್ರೀಮತಿ ಜ್ಯೋತಿ ಮಾಧವ ಪ್ರಭು ಹಾಗೂ ಆರ್ಗೋಡು ಮತ್ತು ಉಪ್ಪುಂದದವರ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.

ಶ್ರೀ ಶೆಣೈಯವರ ಶ್ರೀ ಮತಿಯವರಿಗೆ ಹಸಿರು ಬಳೆಗಳೊಂದಿಗೆ ಮುತ್ತೈದೆ ಸಮ್ಮಾನ ನೀಡಲಾಯಿತು.
ಶ್ರೀ ಶೆಣೈಯವರ ಪುತ್ರ ವಿಷ್ಣು ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.