ಡೈಲಿ ವಾರ್ತೆ: 31/DEC/2023

ಶಿರಸಿ: ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಗೆ ಕಾರು ಡಿಕ್ಕಿ – ಗಂಭೀರ ಗಾಯ

ಶಿರಸಿ: ತಾಲೂಕಿನ ಬನವಾಸಿ ರಸ್ತೆಯಲ್ಲಿ ಇರುವ ಕ್ಯಾಂಪ್ಕೊ ಸಂಸ್ಥೆ ಬಳಿ ಪ್ರವಾಸಕ್ಕೆ ಬಂದ ವಿದ್ಯಾರ್ಥಿಗೆ ಕಾರೊಂದು ಬಡಿದು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.

ಯಾದಗಿರಿ ಜಿಲ್ಲೆಯ ವಿದ್ಯಾರ್ಥಿ ಅಭಿಶೇಕ ಮಂಜುನಾಥ ಬೋವಿ (15) ಗಾಯಗೊಂಡ ವಿದ್ಯಾರ್ಥಿ
ಬಸ್ ನಿಲ್ಲಿಸಿ ಮಕ್ಕಳು ಉಪಹಾರ ಮಾಡುತ್ತಿದ್ದ ಸಂದರ್ಭ ಅಚಾನಕ್ ರಸ್ತೆ ದಾಟಿದ ವಿದ್ಯಾರ್ಥಿಗೆ ಕಾರು ಬಡಿದು ಈ ಘಟನೆ ನಡೆದಿದೆ ಎನ್ನಲಾಗಿದೆ.

ಹೆಚ್ಚಿನ ಚಿಕಿತ್ಸೆಗೆ ವಿದ್ಯಾರ್ಥಿಯನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಕಳಿಸಲಾಗಿದೆ.