ಡೈಲಿ ವಾರ್ತೆ: 01/JAN/2024

ಬಳ್ಳಾರಿ: ಕ್ಷುಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಬಳ್ಳಾರಿ: ಕ್ಷುಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬಳ್ಳಾರಿಯಲ್ಲಿ ತಡರಾತ್ರಿ ನಡೆದಿದೆ.

ಸೈದುಲ್ಲ ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದ ಮೂವರ ಪೈಕಿ ಇಬ್ಬರ ಬಂಧನವಾಗಿದೆ.
ಮುಖೇಶ್ ಮತ್ತು ರಾಜೇಶ ಬಂಧನಗೊಳಗಾಗಿದ್ದು, ವೆಂಕಟೇಶ ಎಂಬವರು ನಾಪತ್ತೆಯಾಗಿದ್ದಾರೆ.

ಘಟನೆಯ ವಿವರ: ಮೃತ ಸೈದುಲ್ಲ ಮತ್ತು ಸಹೋದರ ರಾಜ ವಲಿ ಎಂಬವರು ಕೇಕ್ ತರಲು ಬೇಕರಿಗೆ ತೆರಳಿದ್ದರು. ಅದೇ ಬೇಕರಿ ಬದಿಯಲ್ಲಿ ಆರೋಪಿಗಳಾದ ಮುಖೇಶ್, ರಾಜೇಶ ಮತ್ತು ವೆಂಕಟೇಶ ಕುಡಿದು ಮಲಗಿದ್ದರು. ಇವರುಗಳನ್ನು ಸೈಡಿಗೆ ಸರಿಯಲು ಹೇಳಿದ್ದಕ್ಕೆ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.