ಡೈಲಿ ವಾರ್ತೆ: 27/Jan/2024

ವರದಿ: ವಿದ್ಯಾಧರ ಮೊರಬಾ

ಅಂಕೋಲಾ: ಸಾರಿಗೆ ಬಸ್ ನಿರ್ವಾಹಕ ಮರುಳಿ ನಾಯ್ಕ ನಿಧನ : ಕಲಾವಿದರ ಬಳಗಕ್ಕೆ ತುಂಬಲಾರದ ನಷ್ಟ !

ಅಂಕೋಲಾ : ರಂಗಭೂಮಿಯಲ್ಲಿ ಅಪಾರ ಆಸಕ್ತಿ ಹಾಗೂ ಪ್ರಬುದ್ಧತೆಯಿಂದ ತೊಡಗಿಸಿಕೊಂಡಿದ್ದ ಅಂಕೋಲಾ ಸಾರಿಗೆ ಘಟಕದಲ್ಲಿ ಬಸ್ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೇಣಯ ಹಿರಿಯ ಕಲಾವಿದ ಮುರಳಿ ಎಚ್.ನಾಯ್ಕ (58) ಅವರು ಶನಿವಾರ ಅಕಾಲಿಕವಾಗಿ ನಿಧನಗೊಂಡಿದ್ದಾರೆ.
ಅಲ್ಪಕಾಲದ ಅನಾರೋಗ್ಯದಿಂದ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ತಮ್ಮ ಕರ್ತವ್ಯದ ಬಳಿಕ ರಾತ್ರಿ ವೇಳೆ ಬಸ್ ನಿಲ್ದಾಣದ ಆವರಣದಲ್ಲಿ ಕಸಬರಿಗೆ ಹಿಡಿದು ಸ್ವಚ್ಛತೆಗೆ ಅಲ್ಪ ಕಾಲ ಕಳೆಯುತ್ತಿದ್ದರು.

ಈ ಕಾರ್ಯ ಕೂಡ ಸಾರಿಗೆ ಇಲಾಖೆಯ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾ ಗಿದ್ದರು. ಇಲಾಖೆಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಸೇರಿದಂತೆ 25 ವರ್ಷದ 6 ತಿಂಗಳು ಸೇವೆ ಸಲ್ಲಿಸಿದರು. ಚಿಕ್ಕಂದಿನಿಂದಲೂ ಅನೇಕ ನಾಟಕದಲ್ಲಿ ನಟಿಸಿ ನಿರ್ದೇಶನ ಮಾಡಿದ್ದ ಮರುಳಿ ಎಚ್.ನಾಯ್ಕ ಅವರ ಅಕಾಲಿಕ ನಿಧನಕ್ಕೆ ಕೇಣ ಯ ಸಮಸ್ತ ಕಲಾವಿದರು ಮತ್ತು ಅಂಕೋಲಾ ಘಟಕದ ಸಾರಿಗೆ ಸಂಸ್ಥೆ ಯ ಅಧಿಕಾರಿ ವರ್ಗದವರು ಸಂತಾಪ ಸೂಚಿಸಿದ್ದಾರೆ.