ಡೈಲಿ ವಾರ್ತೆ: 29/Jan/2024

ಮುಹಿಯಿದ್ದೀನ್ ಜಾಮಿಯಾ ಮಸ್ಜಿದ್ ಗಂಗಾವಳಿ ವಾರ್ಷಿಕೋತ್ಸವ ಪಳ್ಳಿ ನೇರ್ಚೆ.

ಮುಹಿಯಿದ್ದೀನ್ ಜಾಮಿಯಾ ಮಸ್ಜಿದ್ ಗಂಗಾವಳಿ ಇದರ ವಾರ್ಷಿಕೋತ್ಸವ ಪಳ್ಳಿ ನೇರ್ಚೆ ಜಮಾತಿನ ಗೌರವಾಧ್ಯಕ್ಷರಾದ ಸಯ್ಯದ್ ಕೆ .ಎಸ್. ಆಟಕೋಯ ತಜ್ಞಲ್ ಕುಂಬೋಲ್ ಇವರ ನೇತೃತ್ವದಲ್ಲಿ ದಿನಾಂಕ 23.1.2024 ಮಂಗಳವಾರ ದಿಂದ ಪ್ರಾರಂಭವಾಗಿ ದಿನಾಂಕ 28.1.2024 ಆದಿತ್ಯವಾರ ಮುಕ್ತಾಯ ಗೊಂಡಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮುಹಿಯುದ್ದಿನ್ ಜಾಮಿಯಾ ಮಸ್ಜಿದ್ ಖತೀಬರಾದ “ಮುಹಮ್ಮದ್ ಸಫ್ವಾನ್ ಜೌಹರಿ “ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ದಾರಿ ತಪ್ಪುತ್ತಿರುವ ಯುವಕರು ಎಂಬ ವಿಷಯದಲ್ಲಿ ಖ ತೀಬರು ಕೇಂದ್ರ ಜುಮಾ ಮಸೀದಿ ಪೊಯ್ಯೇತ್ತಬೇಲ್ “ಅಬ್ದುಲ್ ಜಬ್ಬಾರ್ ಸಖಾಫಿ ಅಲ್ ಆರ್ಷದಿ ಪಾತೂರು” ಭಾಷಣ ಮಾಡಿದರು.


“ಸೈಯದ್ ಅಲವಿ ತಜ್ಞಲ್ ಅಲ್ ಬುಖಾರಿ ಕರ್ಕಿ ತ್ವಾಹ ತಜ್ಞಳ್ ಶಾಹಿನ್ ಬಾಬು ಮತ್ತು ನಾಸಿಫ್ ಕಲ್ಲಿಕೋಟೆ.” ಇವರಿಂದ ಬುರ್ಧಾ ಮಜಲಿಸ್ ನಡೆಯಿತು. “ಸಿಹಾನ್ “ಉಳ್ಳಾಲ ಹಾಗು ಸಂಗಡಿಗರಿಂದ ನಾತೆ ಶರೀಫ್ ಕಾರ್ಯಕ್ರಮ ನಡೆಯಿತು. ಅದೇ ರೀತಿ ಶನಿವಾರ ಮಗ್ರಿಬ್ ನಮಾಜಿನ ನಂತರ “ಶೈಖುನಾ ಅಲ್ಹಾಜ್ ಸೈಯದ್ ಮುಹಮ್ಮದ್ ಕೆ.ಎಸ್.ಆಟಕೋಯಾ ತಜ್ಞಲ್ ಕುಂಬೋಲ್ ಕೇರಳ” ಇವರ ನೇತೃತ್ವ ದಲ್ಲಿ ಬ್ರಹತ್ ಜಾಲಾಲಿಯಾ ರಾತೀಬ್ ನೆರೆವೇರಿತು. ಇಶಾ ನಮಾಜಿನ ನಂತರ ಮುಖ್ಯ ಪ್ರಭಾಷಣಕಾರರಾಗಿ. ಕೇ.ಪಿ. ಸಿರಾಜುದ್ದಿನ್ ಸಖಾಫಿ ಕನ್ಯಾನ.ಮುದರ್ರಿಸ್ ಬದ್ರಿಯಾ ಜುಮಾ ಮಸೀದಿ ಬನ್ನೂರು.ನೈತಿಕತೆ ಕಳೆದುಕೊಳ್ಳುತ್ತಿರುವ ಯುವ ಸಮುಹ ಎಂಬ ವಿಷಯದ ಬಗ್ಗೆ ಬಾಷಣಗೈದರು. ವೇದಿಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗು ಸದಸ್ಯರು ಮತ್ತು ಉಲಮಾ ಉಮರಾ ನೇತಾರರು ಉಪಸ್ಥಿತರಿದ್ದರು.
ಬಾನುವಾರ ಬೆಳಿಗ್ಗೆ ದುವಾ ಕಾರ್ಯಕ್ರಮ ನೆರೆವೇರಿತು.ನಂತರ ತಬರುಕ್ ಹಾಗು ಅನ್ನದಾನ ನಡೆಯಿತು. ಊರಿನ ಹಾಗು ಪರ ಊರಿನ ಸಹಸ್ರಾರು ಜನರು ಪಳ್ಳಿ ನೇರ್ಚೆ ಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮವನ್ನು ಹುಸೇನ್ ಬಿಜಾಪುರ ನೆರೆವೇರಿಸಿ ಧನ್ಯವಾದ ಅರ್ಪಿಸಿದರು.