ಡೈಲಿ ವಾರ್ತೆ: 22/April/2024

ಚೊಂಬು ದೇಶಾದ್ಯಂತ ಸದ್ದು ಮಾಡುತ್ತಿದೆ:
ನೆಲ್ಲಿಬೆಟ್ಟು ತೆಂಕ್ ಹೋಳಿ ಪಡುಹೋಳಿ ವಾರ್ಡ್ ಕಾಂಗ್ರೆಸ್

ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಕೋಟ ಬ್ಲಾಕ್ ಕಾಂಗ್ರೆಸ್ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ  ನೆಲ್ಲಿಬೆಟ್ಟು ತೆಂಕ್ಹೋಳಿ ಪಡುಹೋಳಿ ವಾರ್ಡ್ ನಲ್ಲಿ “ಚೊಂಬು” ಪ್ರತಿಭಟನೆ ಬೂತ್ ಅಧ್ಯಕ್ಷರಾದ ಸುರೇಶ್ ನೆಲ್ಲಿಬೆಟ್ಟು ಹಾಗೂ ನರಸಿಂಹ ದೇವಾಡಿಗ ನೆಲ್ಲಿಬೆಟ್ಟು ಇವರ ನೇತೃತ್ವದಲ್ಲಿ ನಡೆಯಿತು ಕರ್ನಾಟಕದ ತೆರಿಗೆ ಪಾಲನ್ನು ಸರಿಯಾಗಿ ನೀಡದೆ, ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾಗಿರುವ ನೆರೆ, ಬರ ಪರಿಹಾರ ಮೊತ್ತವನ್ನು ನೀಡದೆ, ಕರ್ನಾಟಕ ಸಂಗ್ರಹಿಸಿ ಕೊಟ್ಟ ತೆರಿಗೆ ಹಣವನ್ನು ಮರಳಿಸದ ಕೇಂದ್ರ ಬಿಜೆಪಿ ಸರಕಾರ ವಂಚಿಸುತ್ತಿರುವುದರ ವಿರುದ್ಧ ಕಾಂಗ್ರೆಸ್ ಆರಂಭಿಸಿರುವ “ಚೊಂಬು” ಚಳುವಳಿಯನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿಯೂ  ನಡೆಸಲಾಯಿತು. ಕೇಂದ್ರದಿಂದ ಕರ್ನಾಟಕಕ್ಕೆ ಕನ್ನಡಿಗರಿಗೆ ದೊರಕಿರುವುದು ಕೇವಲ “ಚೊಂಬು” ಮಾತ್ರ ಎಂದು ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಗಣೇಶ್ ಕೆ ನೆಲ್ಲಿಬೆಟ್ಟು ಹಾಗೂ ಪಕ್ಷದ ಕಾಂಗ್ರೆಸ್ ಕಾರ್ಯಕರ್ತರು  ಉಪಸಿತರಿದ್ದರು.