ಡೈಲಿ ವಾರ್ತೆ: 25/April/2024

ಡೈಲಿ ವಾರ್ತೆ.ವರದಿ: ಶಿವಾನಂದಸ್ವಾಮಿ ಆರ್.ಬಿದರಕುಂದಿ ದೊರೆ

ರಾಜಾ ವೇಣುಗೋಪಾ ನಾಯಕರ ಗೆಲುವಿಗೆ ಘತ್ತರಗಿ ಕ್ಷೇತ್ರಕ್ಕೆ ಬರಿಗಾಲ ಪಾದಯಾತ್ರೆ.


ಯಾದಗಿರಿ: (ಏ25 )ಇಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಹಲವು ಕಾರ್ಯಕ್ರಮಕ್ಕಾಗಿ ಆಗಮಿಸಿದ ಯೂತ್ ಜಿಲ್ಲಾ ಅಧ್ಯಕ್ಷರಾದ ರಾಜ ಕುಮಾರ್ ನಾಯಕ್ ಸುರಪುರ ರಾಜ ಹರ್ಷವರ್ಧನ್ ನಾಯಕ್ ಅವರನ್ನ ಕಾಂಗ್ರೆಸ್ ಪಕ್ಷದ ಹಿರಿಯರು ಯುವಕರು ಬಾಜಾ ಭಜಂತ್ರಿ ಯೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡರು.

ಬಳಿಕ  ಗ್ರಾಮದ ಅಂಬಿಗರ ಚೌಡಯ್ಯನ ವೃತ್ತಕ್ಕೆ ಕನಕದಾಸ ವೃತಕೆ ಶ್ರೀ ವಾಲ್ಮೀಕಿ ವೃತ್ತಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.

ನಂತರ ಬಂಡಾರದ ಒಡೆಯರಾಗಿರ್ತಕ್ಕಂತ ಅರ್ಚಕರಾದ ಶ್ರೀ ಸಕ್ರಪ್ಪ ತಾತನವರಿಗೆ ಗೌರವಿಸಿ ಸನ್ಮಾನಿಸಿ ಆಶೀರ್ವಾದ ಪಡೆದರು. ಶ್ರೀಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ ಪ್ರಮುಖ ಬೀದಿಗಳೊಂದಿಗೆ ಮೆರವಣಿಗೆ ಮುಖಾಂತರ ಹೋಗಿ ಗ್ರಾಮ ದೇವತೆಗೆ ಶ್ರೀ ಬಲ್ಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸುರಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಜ ವೇಣುಗೋಪಾಲ್ ನಾಯಕರನ್ನು ಪ್ರಚಂಡ ಬಹುಮತದಿಂದ ಗೆಲ್ಲಲಿ ತಂದೆಯಂತೆ ಮಗನು ಸುರಪುರ ಕ್ಷೇತ್ರವನ್ನು  ಸಮಗ್ರ ಅಭಿವೃದ್ಧಿಪಡಿಸಲು ಸುರಪುರದ ಶಾಸಕರಾಗಲಿ ಎಂದು ಹರಕೆ ತೀರಿಸಲು ದೇವರಾಜ್ ಕೋಚ್ ಮತ್ತು ಆತನ ತಂಡ ಐದು ಜನ ಯುವಕರು ಸುಡುವ ರಣ ಬಿಸಿಲಿನಲ್ಲಿ ಹರಕೆ ತೀರಿಸಲು ಆದಿಶಕ್ತಿ ಘತ್ತರಗಿ ಭಾಗಮ್ಮ ನಿಗೆ ಪಾದಯಾತ್ರೆ ಹೊರಟ ಯುವಕರಿಗೆ ಸನ್ಮಾನಿಸಿ ಗೌರವಿಸಿ ತಮ್ಮ ಪ್ರಯಾಣ ಸುಖಕರವಾಗಲಿ ಎಂದು ಹಾರೈಸಿ ಬೀಳ್ಕೊಟ್ಟರು ನಂತರ ಪ್ರಮುಖ ಬೀದಿಗಳೊಂದಿಗೆ ಮೆರವಣಿಗೆ ಮುಖಾಂತರ ಹೊರಟ ಯುವಕರ ಕಣ್ಮಣಿಗಳಾದ ರಾಜಕುಮಾರ ನಾಯಕ್ ರಾಜ ಹರ್ಷವರ್ಧನ್ ನಾಯಕ್ ಅವರಿಗೆ ಗ್ರಾಮದ ಮಹಿಳೆಯರು ನೀರು ನೀಡಿ ತಿಲಕವಿಟ್ಟು ಆರತಿಬೇಳಗಿ ನಿಮಗೆ ಜಯ ಸಿಗಲಿ ಎಂದು ಹಾರೈಸಿದರು.

ಇದೇ ವೇಳೆ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ವಿಶೇಷ ಪೂಜೆ ಮಾಡಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ  ವೆಂಟೇಶ ಬೇಟೆಗಾರ,ಸೂಗುರೇಶ ವಾರರ, ಬಂಡಾರಪ್ಪ ನಾಟ್ಯಕರ,   ದೊಡ್ಡಪ್ಪ ಮುದನೂರು, ಹಾಗೂ ಜಿಲ್ಲಾ ಪಂಚಾಯತ ಮಾಜಿ ಸದಸ್ಯರು, ಮತ್ತು  ST ವಿಭಾಗದ ಜಿಲ್ಲಾ ಅಧ್ಯಕ್ಷರು,ಗ್ರಾಮದ  ಹಿರಿಯರು ಯುವಕರು RKN ಕುಟುಂಬದ ಅಭಿಮಾನಿಗಳು ಸಾವಿರಾರು ಜನ ಭಾಗಿಯಾದರು ಮತ್ತು ಹಲವು ವಕ್ತಿಗಳು ಕಾಂಗ್ರೆಸ ಪಕ್ಷ ಸೇರ್ಪಡೆಯಾದರು.