ಡೈಲಿ ವಾರ್ತೆ: 27/April/2024

ನಾಗ ದೇವರಿಗೆ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದ ಕೆ. ಜಯಪ್ರಕಾಶ್ ಹೆಗ್ಡೆ

ಕುಂದಾಪುರ: ಎರಡನೇ ಹಂತದ ಚುನಾವಣೆ ನಿನ್ನೆ ಯಾವುದೇ ಸಂಕಷ್ಟ ವಿಲ್ಲದೆ ಮುಗಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಚುನಾವಣೆಯ ಮರುದಿನವಾದ ಇಂದು ಕುಟುಂಬದ ಜೊತೆಗೆ ಸಮಯ ಕಳೆದ್ದಿದ್ದಾರೆ.

ಕುಂದಾಪುರ ತಾಲೂಕಿನ ಕೊರ್ಗಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಕಾರ್ಯಕರ್ತರ ಜೊತೆ ಸುಮಾಲೋಚನೆ ನಡೆಸಿದ್ದಾರೆ. ಬಳಿಕ ಕುಟುಂಬದ ನಾಗಬನಕ್ಕೆ ತೆರಳಿ ಪರಿವಾರ ಸಮೇತರಾಗಿ ಪೂಜೆ ಸಲ್ಲಿಸಿ ನಾಗ ದೇವರ ಕೃಪೆಗೆ ಪಾತ್ರರಾಗಿದ್ದಾರೆ.