ಡೈಲಿ ವಾರ್ತೆ: 29/April/2024

ಪಡುಬಿದ್ರೆ: ಕ್ಷುಲ್ಲಕ ವಿಚಾರಕ್ಕೆ ಕಾರು ಚಾಲಕನಿಂದ ಬಸ್ ಚಾಲಕನ ಮೇಲೆ ಹಲ್ಲೆ!

ಪಡುಬಿದ್ರೆ: ಕ್ಷುಲ್ಲಕ ವಿಚಾರಕ್ಕೆ ಕಾರು ಚಾಲಕನೋರ್ವ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ಪಡುಬಿದ್ರೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಮಾಸ್ಟರ್ ಹೆಸರಿನ ಎಕ್ಸ್ ಪ್ರೆಸ್ ಬಸ್ ಉಡುಪಿಯಿಂದ ಮಂಗಳೂರು ಕಡೆಗೆ ಬರುತ್ತಿರುವಾಗ ಎರ್ಮಾಳ್ ಸಮೀಪ ಕಾರ್ ಚಾಲಕನಿಗೆ ಸೈಡ್ ಕೊಡುವಂತೆ ಹಾರ್ನ್ ಹಾಕಿ ಓವ‌ರ್ ಟೇಕ್ ಮಾಡಿದ್ದ, ಬಳಿಕ ಹಿಂಬಾಲಿಸಿಕೊಂಡು ಬಂದ ಕಾರು ಚಾಲಕ ಬಸ್ಸನ್ನು ತಡೆದು ಚಾಲಕ ಶೈಲು ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.


ಪಡುಬಿದ್ರಿ ನಿವಾಸಿ ಬಸ್ ಚಾಲಕ ಶೈಲು ಯಾನೆ ಶೈಲೇಶ್ ಘಟನೆಯಲ್ಲಿ ಮುಖದ ಭಾಗಕ್ಕೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂಲ್ಕಿ ಕೊಲ್ನಾಡ್ ಪರಿಸರದ ಯುವಕ ಕೃತ್ಯ ಎಸಗಿದವನು ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಲಾಗಿದೆ