ಡೈಲಿ ವಾರ್ತೆ: 10/ಮೇ /2024

ಮಿತ್ತೂರು ; ಅಟೋ  ಅಫಘಾತ :   ಮಾನವೀಯತೆ ಮೆರೆದ ಅಶ್ರಫ್ ತಿಂಗಳಾಡಿ – ಕೆ.ಎಂ.ಸಿ ಆಸ್ಪತ್ರೆ ವತಿಯಿಂದ  ಅಭಿನಂದನಾ ಪತ್ರ

ಬಂಟ್ವಾಳ : ಮಿತ್ತೂರು ರೈಲ್ವೇ ಓವರ್‌ ಬ್ರಿಡ್ಜ್ ಸಮೀಪ ರಿಕ್ಷಾವೊಂದು ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಆಟೋ ಚಾಲಕ, ಪಾಟ್ರಕೋಡಿ – ಮಿತ್ತಪಡ್ಪು   ನಿವಾಸಿ ನೀಲಪ್ಪ ಮೂಲ್ಯ ಗಾಯಗೊಂಡಿದ್ದರು..

ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ತೆರಳುತ್ತಿದ್ದ ಮಿತ್ತೂರು ಭಾರತ್ ವೆಹಿಕಲ್ ಬಜಾ‌ರ್ ಮಾಲಕ ಅಶ್ರಫ್  ತಿಂಗಳಾಡಿ ತಕ್ಷಣ ಕಾರ್ಯ ಪ್ರವೃತರಾಗಿ ಗಾಯಾಳು ನೀಲಪ್ಪ ಮೂಲ್ಯ ಅವರಿಗೆ ಪ್ರಥಮ ಚಿಕಿತ್ಸೆ ಮೂಲಕ ಉಪಚರಿಸಿ,  ಆಸ್ಪತ್ರೆಗೆ ದಾಖಲಿಸಿ ತಕ್ಷಣ ಚಿಕಿತ್ಸೆ ದೊರೆಯುವಂತೆ  ಮಾಡುವಲ್ಲಿ ಯಶಸ್ವಿಯಾಗಿದ್ದರು.

ಅಶ್ರಫ್ ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಕೆ.ಎಂ.ಸಿ ಆಸ್ಪತ್ರೆ ಅಭಿನಂದನಾ ಪ್ರಮಾಣಪತ್ರ ನೀಡಿ ಗೌರವಿಸಿದೆ.