ಡೈಲಿ ವಾರ್ತೆ: 30/ಮೇ /2024

ಆಲದಪದವು ; ಜೂನ್ 01 ರಂದು ಅಲ್-ಮಸ್ಜಿದುಲ್ ಬದ್ರಿಯಾ ಇದರ ಅಧೀನದ ನೂರುಲ್ ಇಸ್ಲಾಂ ಮದ್ರಸದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಮತಪ್ರವಚನ ಕಾರ್ಯಕ್ರಮ

ಬಂಟ್ವಾಳ : ತಾಲೂಕಿನ ವಾಮದಪದವು ಸಮೀಪದ ಆಲದಪದವು ಅಲ್-ಮಸ್ಜಿದುಲ್ ಬದ್ರಿಯಾ ಇದರ ಅಧೀನದ ನೂರುಲ್ ಇಸ್ಲಾಂ ಮದ್ರಸದ ನೂತನ  ಕಟ್ಟಡದ ಉದ್ಘಾಟನೆ ಹಾಗೂ ಮತಪ್ರವಚನ ಕಾರ್ಯಕ್ರಮವು ಜೂನ್ 1 ರಂದು ಶನಿವಾರ ಮಗ್ರಿಬ್ ನಮಾಝ್ ಬಳಿಕ ಇಲ್ಲಿನ ಮದ್ರಸ ವಠಾರದ ಮರ್‍ಹೂಂ ಯಾಕೂಬ್ ಮುಸ್ಲಿಯಾರ್ ವೇದಿಕೆಯಲ್ಲಿ ನಡೆಯಲಿದೆ.

ಕೃಷ್ಣಾಪುರ ಬದ್ರಿಯಾ ಜುಮಾ ಮಸ್ಜಿದ್ ಮುಸ್ಲಿಂ ಜಮಾಅತ್ ಖಾಝಿ ಹಾಜಿ ಇ.ಕೆ. ಇಬ್ರಾಹಿಂ ಮುಸ್ಲಿಯಾರ್ ನೂತನ ಮದ್ರಸ ಕಟ್ಟಡ ಉದ್ಘಾಟಿಸುವರು. ಸಯ್ಯಿದ್ ಕೆ.ಪಿ.ಎಸ್ ಝೈನುಲ್ ಆಬಿದೀನ್ ಜಮಾಲುಲ್ಲೈಲಿ ತಂಙಳ್ ಕಾಜೂರು ಅವರು ದುವಾ ನೇತೃತ್ವ ವಹಿಸುವರು. ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಮಸೀದಿ ಹಾಗೂ ಮದ್ರಸ ಆಡಳಿತ ಸಮಿತಿ ಅಧ್ಯಕ್ಷ ಹಂಝ ಬಸ್ತಿಕೋಡಿ ಅಧ್ಯಕ್ಷತೆ ವಹಿಸುವರು. ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಅವರು ಸಂದೇಶ ನೀಡುವರು. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮುಖ್ಯ ಭಾಷಣಗೈಯುವರು. ಕೆಸಿಎಫ್ ಕೃಷ್ಣಾಪುರ ಅಧ್ಯಕ್ಷ ಅಬ್ದುಲ್ ಖಾದರ್ (ಸಾದಿಕ್) ಅವರು ಮದ್ರಸ ಕಟ್ಟಡ ಕೀ ಹಸ್ತಾಂತರಿಸುವರು.

      ಕಾರ್ಯಕ್ರಮದಲ್ಲಿ ಹಲವು ಧಾರ್ಮಿಕ, ಸಾಮಾಜಿಕ ಗಣ್ಯರು ಭಾಗವಹಿಸುವರು ಎಂದು ಮಸೀದಿ ಮತ್ತು ಮದ್ರಸ ಪ್ರಕಟಣೆ ತಿಳಿಸಿದೆ.