ಡೈಲಿ ವಾರ್ತೆ: 21/ಜೂ./2024

ಕೋಟ: ಹೆದ್ದಾರಿ ಬದಿಯಲ್ಲಿ ಅನಾಥವಾಗಿ ನಿಂತಿದ್ದ ಲಾರಿ ತೆರವು

ಕೋಟ: ರಾಷ್ಟ್ರೀಯ ಹೆದ್ದಾರಿ 66 ರ ಕೋಟ ಪೆಟ್ರೋಲ್ ಬಂಕ್ ಬಳಿ ಸುಮಾರು ಎರಡು ತಿಂಗಳಿಂದ ಗುಜರಾತ್ ನೊಂದಾವಣಿಯ ಲಾರಿ ಯೊಂದು ಅನಾಥವಾಗಿ ನಿಂತಿದ್ದು. ಅದನ್ನು ಕೊನೆಗೂ ಕೋಟ ಆರಕ್ಷಕರ ಹಾಗೂ ಸ್ಥಳೀಯ ಜೀವನ್ ಮಿತ್ರ ತಂಡದ ಪರಿಶ್ರಮದಿಂದ ಅಲ್ಲಿಂದ ತೆರವುಗೊಳಿಸಲಾಯಿತು.

ಎರಡು ತಿಂಗಳಿಂದ ಅಪಘಾತಕ್ಕೆ ಎಡೆಮಾಡಿಕೊಡುತ್ತಿದ್ದ ಲಾರಿ ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ನಿರ್ವಹಿಸುತ್ತಿರುವ ಟೋಲ್‌ನ ಪ್ರಸ್ತುತ ಕಂಪನಿ ಹಾಗೂ ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯ ವಹಿಸಿತ್ತು. ಇದೀಗ ಕೋಟದ ಜೀವನ್ ಮಿತ್ರ ಬಳಗ ಹಾಗೂ ಮಾಧ್ಯಮ ಕಳಕಳಿಗೆ ಕೋಟ ಠಾಣಾಧಿಕಾರಿ ತೇಜಸ್ವಿ ಸ್ಥಳ ಪರಿಶೀಲಿಸಿ ತೆರೆವು ಕಾರ್ಯಕ್ಕೆ ಮುಂದಾದರು.

ಲಾರಿ ತೆರವು ಕಾರ್ಯದಲ್ಲಿ ಕೋಟ ಠಾಣಾಧಿಕಾರಿ ತೇಜಸ್ವಿ, ಸಿಬ್ಬಂದಿ ಪ್ರಸನ್ನ ಕುಮಾರ್, ಸಮಾಜ ಸೇವಕ ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್, ವಸಂತ ಸುವರ್ಣ, ಗೋಪಾಲ್, ಕಿಶನ್ ಭಟ್ ಇದ್ದರು.