ಡೈಲಿ ವಾರ್ತೆ: 13/ಜುಲೈ /2024

ಆಲೂರು ಗೋಳಿಕಟ್ಟೆ ಸಂಪನ್ನ ಶೆಟ್ಟಿ ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ

ಕುಂದಾಪುರ: ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕು ಆಲೂರು ಗೋಳಿಕಟ್ಟೆ ದುಗ್ಗಪ್ಪ ಶೆಟ್ಟಿ ಮನೆ ಸಂಪನ್ನ ಶೆಟ್ಟಿ ತೇರ್ಗಡೆ ಹೊಂದಿದ್ದಾರೆ.

ಇವರು ಬೈಂದೂರು ತಾಲೂಕು ಹೇರೂರು ಗ್ರಾಮದ ಗರಡಿ ಮನೆ ಶೇಖರ ಶೆಟ್ಟಿ ಮತ್ತು ಆಲೂರು ಗೋಳಿಕಟ್ಟೆ ದುಗ್ಗಪ್ಪ ಶೆಟ್ರ ಮನೆ ಸುಜಾತಾ ಶೆಟ್ಟಿ ದಂಪತಿಗಳ ಪುತ್ರ.
ಇವರು ಉಡುಪಿಯ ಸುರೇಂದ್ರ ನಾಯಕ್ ಕೋ.ಚಾರ್ಟೆಡ್ ಅಕೌಂಟೆಂಟ್ ಅವರಲ್ಲಿ ತರಬೇತಿ ಪಡೆದುಕೊಂಡಿರುತ್ತಾರೆ.