ಡೈಲಿ ವಾರ್ತೆ: 14/ಜುಲೈ /2024

ರಾಜ್ಯದ ನೂತನ ಉಪ ಲೋಕಾಯುಕ್ತರಾಗಿ ನೇಮಕಗೊಂಡ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶ್ರೀ ಬಿ. ವೀರಪ್ಪ ಇವರನ್ನು ಭೇಟಿ ಮಾಡಿ
ಪುಷ್ಪಗುಚ್ಛ ನೀಡಿ ಅಭಿನoದಿಸಿದ ಉಡುಪಿ ವಕೀಲರ ಸಂಘದ ನಿಯೋಗ

ಉಡುಪಿ: ಕರ್ನಾಟಕ ರಾಜ್ಯದ ನೂತನ ಉಪ ಲೋಕಾಯುಕ್ತರಾಗಿ ಇತ್ತೀಚೆಗೆ ನೇಮಕಗೊಂಡ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶ್ರೀ ಬಿ. ವೀರಪ್ಪ ಇವರನ್ನು ಇಂದು ಭೇಟಿಯಾದ ಉಡುಪಿ ವಕೀಲರ ಸಂಘದ ನಿಯೋಗವು ಅವರಿಗೆ ಪುಷ್ಪಗುಚ್ಛ ನೀಡಿ ಅಭಿನoದಿಸಿತು.

ನೂತನ ಉಪ ಲೋಕಾಯುಕ್ತರನ್ನು ಉಡುಪಿಗೆ ಆಹ್ವಾನಿಸಿದ ನಿಯೋಗವು, ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿ ಹಾಗೂ ನೌಕರ ವರ್ಗದಲ್ಲಿ ಚುರುಕು ಮೂಡಿಸಿ, ಜನ ಸಾಮಾನ್ಯರಿಗೆ ಸರಕಾರಿ ಸೇವೆಗಳು ಶೀಘ್ರ ದೊರಕುವಂತೆ ಮಾಡಬೇಕೆಂದು ಮನವಿ ಮಾಡಿತು. ನಿಯೋಗದಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಪದಾಧಿಕಾರಿಗಳಾದ ಆರೂರು ಸುಕೇಶ್ ಶೆಟ್ಟಿ, ಸಂತೋಷ್ ಕುಮಾರ್ ಮೂಡುಬೆಳ್ಳೆ, ಬೈಲೂರು ರವೀಂದ್ರ ದೇವಾಡಿಗ, ರಜನಿಕಾಂತ್ ಉಪಸ್ಥಿತರಿದ್ದರು.