ಡೈಲಿ ವಾರ್ತೆ: 17/ಜುಲೈ /2024

ಹಾರಾಡಿ: ಶ್ರೀ ಕೃಷ್ಣಪ್ರಸಾದ್ ಕ್ಯಾಶ್ಯೂ ಫ್ಯಾಕ್ಟರಿ ನೂತನ 3 ನೇ ಶಾಖೆ ಲೋಕಾರ್ಪಣೆ

ಬ್ರಹ್ಮಾವರ: ಹಾರಾಡಿ ಶ್ರೀ ಕಪಿಲೇಶ್ವರಿ ದೇವಸ್ಥಾನ ಸಮೀಪ ವಂಡಾರು ಶ್ರೀ ಕೃಷ್ಣಪ್ರಸಾದ್ ಆಗ್ರೋ ಪ್ರೈ. ಲಿ. ನ ಕ್ಯಾಶ್ಯೂ ಫ್ಯಾಕ್ಟರಿ ನೂತನ 3ನೇ ಶಾಖೆ ಜು. 16 ರಂದು ಲೋಕಾರ್ಪಣೆ ಗೊಂಡಿತ್ತು.

ಈ ಕಾರ್ಯಕ್ರಮವನ್ನು ಬಸ್ರೂರು ಶ್ರೀ ಮಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿದರು. ಅವರು ಮಾತನಾಡಿ ಶಿಸ್ತು, ಪರಿಶ್ರಮ, ಜಾಣ್ಮೆಯಿಂದ ಸ್ವ ಉದ್ಯೋಗದಲ್ಲಿ ತೊಡಗಿದರೆ ಯಶಸ್ಸು ಖಂಡಿತ. ತನ್ಮೂಲಕ ಮೂಲಕ ನೂರಾರು ಮಂದಿಗೆ ಉದ್ಯೋಗ ದೊರತು ಸಮಾಜ, ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.

ಹುಟ್ಟೂರಿನಲ್ಲಿ ಉದ್ಯೋಗ ಕೊಂಡುಕೊಳ್ಳುವುದು ಉತ್ಕೃಷ್ಟ ಕಾರ್ಯ, ಸಿಬ್ಬಂದಿಯವರಿಗೆ ಉತ್ತಮ ಸೌಲಭ್ಯ ನೀಡಿ ಮನೆ ಮಕ್ಕಳಂತೆ ನೋಡಿಕೊಳ್ಳುವುದರಿಂದ ಉದ್ಯಮವು ಬೆಳೆಯುತ್ತದೆ, ಅಲ್ಲದೆ ವ್ಯಕ್ತಿತ್ವವು ವೃದ್ಧಿಸುತ್ತದೆ ಇದರಿಂದಾಗಿ ಶ್ರೀ ಕೃಷ್ಣಪ್ರಸಾದ್ ಸಂಸ್ಥೆಯು ಕೇವಲ 12 ವರ್ಷದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಅವರ ಪರಿಶ್ರಮವೇ ಕಾರಣವಾಗಿದೆ ಎಂದು ಅಪ್ಪಣ್ಣ ಹೆಗ್ಡೆ ಹೇಳಿದರು.

ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಚಿತ್ತಾರ ಕ್ಯಾಶ್ಯೂ ಮಾಲಕ, ಕರ್ನಾಟಕ ಕ್ಯಾಶ್ಯೂ ಅಸೋಸಿಯೇಶನ್ ಅಧ್ಯಕ್ಷ‌ ಗೋಪಿನಾಥ ಕಾಮತ್, ಜ್ಯೋತಿಷ್ಯರಾದ ಸುಧೀರ್ ಅಡಿಗ, ಕಾರ್ಕಳ ಬಿಎಸ್ ಕೆ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಬೋಳ ದಾಮೋಧರ ಕಾಮತ್ , ಸ್ಡೇಟ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಎಮ್ ಪ್ರವೀಣ್ ಕುಮಾರ್, ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಮಂಗಳೂರಿನ ಕಲ್ಬಾವಿ ಕ್ಯಾಶ್ಯೂಸ್ ಮಾಲಕ ಪ್ರಕಾಶ್ ಕಲ್ಬಾವಿ, ರವಿರಾವ್, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಬಿರ್ತಿ ರಾಜೇಶ್ ಶೆಟ್ಟಿ, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿ.ಆರ್. ಉಪಸ್ಥಿತರಿದ್ದರು.

ನೂತನ ಸಂಸ್ಥೆಯ ಆರಂಭಕ್ಕೆ ಜಾಗ ಮಾರಾಟ ಮಾಡಿದ್ದ ಶ್ರೀಮತಿ ಯಶೋಧಾ ಕೆ, ಶ್ರೀ ಶಾಂತಾರಾಮ ಪೈ ದಂಪತಿಯನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಅಡಳಿತ ನಿರ್ದೇಶಕ ಸಂಪತ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.