ಡೈಲಿ ವಾರ್ತೆ: 06/ಆಗಸ್ಟ್/2024

ಸಾಲಿಗ್ರಾಮ: ಭಜನಾ ತಂಡದ ಸಂಘಟಿಕ ಅಣ್ಣಪ್ಪಯ್ಯ ಹೆಬ್ಬಾರ್ ಅಸೌಖ್ಯದಿಂದ ನಿಧನ

ಸಾಲಿಗ್ರಾಮ: ಗುರು ನರಸಿಂಹ ದೇವಸ್ಥಾನ ಸಮೀಪದ ನಿವಾಸಿ ಭಜನಾ ಕಾರ್ಯಕ್ರಮದ ಸಂಘಟಕರು ಆಗಿರುವ ಅಣ್ಣಪ್ಪಯ್ಯ ಹೆಬ್ಬಾರ್ ಸೋಮವಾರ ದಂದು ಅಸೌಖ್ಯದಿಂದ ನಿಧನರಾಗಿರುತ್ತಾರೆ.

ಸಾಲಿಗ್ರಾಮ ರಥಬೀದಿಯಲ್ಲಿ ಮನೆಗೆ ಹೊಂದಿಕೊಂಡಿದ್ದ ಸ್ಥಳದಲ್ಲಿ ಸಣ್ಣ ಹೋಟೆಲ್ ನಡೆಸುತ್ತಿದ್ದರು. ಶ್ರೀಯುತರು ಶ್ರೀರಾಮ ಭಜನಾ ಮಂಡಳಿಯಲ್ಲಿ ಸ್ಥಾಪಕ ಸದಸ್ಯರಾಗಿ ಸಂಘಟನೆಯ ಬಲವರ್ಧನೆಯಲ್ಲಿ ಮುಂಚೂಣಿಯಲ್ಲಿದ್ದು ಸೇವೆ ಸಲ್ಲಿಸಿದವರು. ಸೌಮ್ಯ ಸ್ವಭಾದವರಾಗಿದ್ದು ಸ್ಥಳೀಯರಲ್ಲಿ ವಿಶ್ವಾಸಿನಿರಾಗಿ ಸ್ಥಾನ ಹೊಂದಿದ್ದರು.

ಮೃತರು ಹೆಂಡತಿ ಮಕ್ಕಳು ಮತ್ತು ಸಹೋದರ ಸಹೋದರಿಯರನ್ನು ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.