ಡೈಲಿ ವಾರ್ತೆ: 16/ಆಗಸ್ಟ್/2024

ಜನತಾ‌ ಸಮೂಹ ಸಂಸ್ಥೆಯ ಮುಖ್ಯ ಆಡಳಿತ ಕಛೇರಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

ಕೋಟ: ಜನತಾ‌ ಸಮೂಹ ಸಂಸ್ಥೆಯ ಮುಖ್ಯ ಆಡಳಿತ ಕಛೇರಿಯಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಂಸ್ಥೆಯ ಮುಖ್ಯ ಆಡಳಿತ ನಿರ್ದೇಶಕರಾದ ಶ್ರೀಯುತ ಆನಂದ ಸಿ ಕುಂದರ್ ಅವರು ಧ್ವಜಾರೋಹಣ ಗ್ಯೆದರು ನಂತರ ಸಭಾ ಕಾರ್ಯಕ್ರಮದಲ್ಲಿ ಕೆ ಇ ಬಿ ಲ್ಯೆನಮ್ಯಾನಗಳ ಸೇವೆಯನ್ನ ಗುರುತಿಸಿ ಗೌರವಿಸಲಾಯಿತು. ನಂತರ ಭಾರತೀಯ ಸೇನೆಯ ನೀವ್ರತ್ತ ಯೋದ ಶ್ರೀ ಯೋಗೀಶ ಕಾಂಚನ್ ಅವರನ್ನು ಗುರುತಿಸಿ ಗೌರವಿಸಲಾಯಿತು. ತದನಂತರ ಗೀತಾನಂದ ಪೌಂಡೇಶನ್ ವತಿಯಿಂದ ವಾರಂತ್ಯದಲ್ಲಿ ಗಿಡ ನೆಡುವ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀನಿವಾಸ ಅವರ ನೇತ್ರತ್ವದ ತಂಡವನ್ನ ಗುರುತಿಸಿ ಗೌರವಿಸಲಾಯಿತು.

ಸಂಸ್ಥೆಯ ವತಿಯಿಂದ ನಡೆಸಲ್ಪಡುವ ಜನತಾ ಪ್ರೊಪೆಷನಲ್ಲ ಎಂಪ್ಲಾಯಿ ಕೋರ್ಸ್ ಅನ್ನು ಮುಗಿಸಿದವರನ್ನು ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ರಕ್ಷಿತ್ ಕುಂದರ್, ಜನತಾ ಪರಿವಾರದ ಸದಸ್ಯರಾದ ಗೀತಾ ಎ ಕುಂದರ್, ಅಶೋಕ್ ಕುಂದರ್, ದಿವ್ಯಲಕ್ಮೀ ಪ್ರಶಾಂತ್ ಕುಂದರ್, ಮತ್ತು ಸಂಸ್ಥೆಯ ಮುಖ್ಯ ಮಾನವ ಸಂಪನ್ಮೂಲಾಧಿಕಾರಿ ಎಮ್ ಎಸ್ ಕ್ರಷ್ಣ ,ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ! ಧಾನೇಶ್ ಜೀವಾನಿ ಎ ಜಿ ಎಮ್ ಶ್ರೀನಿವಾಸ್ ಕುಂದರ್ ಉಪಸ್ಥಿತರಿದ್ದರು.
ಸಂಸ್ಥೆಯ ಸಿಬ್ಬಂದಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ. ಸಂಸ್ಥೆಯ ವ್ಯವಸ್ಥಾಪಕಾರದ ಮಿಥುನ್ ಕುಮಾರ್ ವಂದಿಸಿದರು.