ವರದಿ: ಅಬ್ದುಲ್ ರಶೀದ್ ಮಣಿಪಾಲ ಕೃಪೆ: ಗಣೇಶ್ ರಾಜ್ ಸರಳೆ ಬೆಟ್ಟು

ಪರ್ಕಳ: ಹೂವಿನ ಪೂಜೆ ದೀಪಾರಾಧನೆ

ಪರ್ಕಳ: ಪೆರ್ಡೂರು ಸಿಂಹಸಂಕ್ರಮಣ ದಂದು ಕೆಳಪರ್ಕಳದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಗಸ್ಟ್ 17ರಂದು ದೀಪಾರಾಧನೆ ಮತ್ತು ಹೂವಿನ ಪೂಜೆಯು ಬಹಳ ವಿಜ್ರಮಣೆಯಿಂದ ದೇವಳದ ಪ್ರಧಾನಅರ್ಚಕರಾದ ವೇದಮೂರ್ತಿ ಪದ್ಮನಾಭ ಭಟ್ ಪರ್ಕಳ ಅವರ ಸಾರಥ್ಯದಲ್ಲಿ ಕೆಳಪರ್ಕದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು.

ಒಂದು ತಿಂಗಳ ಪರ್ಯಂತ ನಡೆಯುವ ದೀಪಾರಾಧನೆ ಮತ್ತು ಹೂವಿನ ಪೂಜೆ. ಮುಂದಿನ ತಿಂಗಳ ಸೆಪ್ಟಂಬರ್ 17ರ ಅನಂತ ವ್ರತದ /(ನೋo ಪು)ತನಕ..ದೇವಳದಲ್ಲಿ ಸ್ಥಳೀಯ ಸದ್ಭಕ್ತರ ಸಹಕಾರದಿಂದ ದೀಪಾಲಂಕಾರ ಮತ್ತು ಹೂವಿನ ಪೂಜೆ ನಿತ್ಯ ರಾತ್ರಿ ಎಂಟರಿಂದ ಆರಂಭಗೊಂಡು ಪೂಜೆ ನಡೆಯುತ್ತಿರುತ್ತದೆ.

ಈ ಸಂದರ್ಭದಲ್ಲಿ ಮೋಹನ್ ದಾಸ್ ನಾಯಕ್ ಪರ್ಕಳ, ಕೇಶವ ನಾಯ್ಕ್, ಆದರ್ಶ ಶೆಟ್ಟಿಗಾರ್ ಕೆಳ ಪರ್ಕಳ, ದೇವಿಪ್ರಸಾದ್ ಆಚಾರ್ಯ, ಚೇತನ್ ಕುಡ್ವ , ಪ್ರಶಾಂತ್ ಪೂಜಾರಿ, ಅಕ್ಷಯ್ ನಾಯಕ್, ಶಶಿಕಾಂತ್ ಶೆಟ್ಟಿಗಾರ್ ಗಣೇಶ್ ರಾಜ್ ಸರಳಬೆಟ್ಟು ಮೊದಲಾದವರು ಜೊತೆಗಿದ್ದರು.