ಡೈಲಿ ವಾರ್ತೆ: 22/ಆಗಸ್ಟ್/2024

ರಝಾನಗರ – ಕಲಾಬಾಗಿಲು ; ಮಸ್ಜಿದ್ -ಎ – ಖಮರುಲ್ ಇಸ್ಲಾಂ,ಇದರ ನೂತನ ಅಧ್ಯಕ್ಷರಾಗಿ ಶೇಕ್ ರಹ್ಮತ್ತುಲ್ಲಾಹ್ ಆಯ್ಕೆ

ಬಂಟ್ವಾಳ : ರಝಾನಗರ ಕಲಾಬಾಗಿಲು ಇಲ್ಲಿನ ಮಸ್ಜಿದ್ ಎ ಖಮರುಲ್ ಇಸ್ಲಾಂ ಇದರ ನೂತನ ಅಧ್ಯಕ್ಷರಾಗಿ ಶೇಕ್ ರಹ್ಮತ್ತುಲ್ಲಾಹ್ ಆಯ್ಕೆಯಾಗಿದ್ದಾರೆ.

ಮಸ್ಜಿದ್ ಗೌರವಾಧ್ಯಕ್ಷ ಹಸನ್ ಸಾಹೇಬ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಉಪಾಧ್ಯಕ್ಷ ರಾಗಿ ಕರೀಮ್ ಸಾಹೇಬ್ ಕಾರ್ಯದರ್ಶಿಯಾಗಿ ನಯಾಝ್ ಶೇಕ್, ಉಪ ಕಾರ್ಯದರ್ಶಿಯಾಗಿ ಅಬ್ದುಲ್ಲಾ ರಝಾನಗರ, ಕೋಶಾಧಿಕಾರಿಯಾಗಿ ಅಬ್ದುಲ್ ಶುಕೂರ್ ಹಾಗೂ ಗೌರವಾಧ್ಯಕ್ಷರಾಗಿ ಹಸನ್ ಸಾಹೇಬ್ ಕಲಾಬಾಗಿಲು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹಸನ್ ಸಾಹೇಬ್, ಅಬ್ದುಲ್ ಅಝೀಝ್ ಸೇವಾ, ಹಮೀದ್ ಪಿ.ಕೆ, ನೂರುಲ್ಲಾ ಮೂಡಬಿದ್ರೆ, ರಶೀದ್ ನೇರಳಕಟ್ಟೆ, ಮಹಮೂದ್ ಸೇವಾ, ಶಬ್ಬೀರ್ ಪಂಜೋಡಿ ಹಾಗೂ ಅಬ್ದುಲ್ ಗಫೂರ್ ರಝಾನಗರ ಇವರನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಆಯ್ಕೆಯಾದ ಶೇಖ್ ರಹ್ಮತುಲ್ಲಾ ಅವರು ರಝಾನಗರ ಬುರೂಜ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ, ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಉಪಾಧ್ಯಕ್ಷ, ಮೀಫ್ ಸಂಸ್ಥೆ ಮಂಗಳೂರು ಇದರ ಕನ್ವೀನರ್, ಸಂಯುಕ್ತ ಜಮಾಅತ್ ಬಂಟ್ವಾಳದ ಜೊತೆ ಕಾರ್ಯದರ್ಶಿ, ರಾಜ್ಯ ಫಸ್ಟ್ ಕರ್ನಾಟಕ ಶಾಲಾ ಒಕ್ಕೂಟ ದ ಉಪಾಧ್ಯಕ್ಷ, ಬಂಟ್ವಾಳ ಕ್ರಷಿಕ ಸಮಾಜದ ಚುನಾಯಿತ ಸದಸ್ಯ, ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.