ಡೈಲಿ ವಾರ್ತೆ: 15/Sep/2024

ಕೋಟತಟ್ಟು ಪಡುಕರೆಯಲ್ಲಿ ರತ್ನಾಕರ್ ಶ್ರೀಯನ್ ಅವರ ಮುಂದಾಳತ್ವದಲ್ಲಿ ಈದ್ ಮಿಲಾದ್ ರ್‍ಯಾಲಿಗೆ ಸಿಹಿ ಹಂಚಿ ಸೌಹಾರ್ದತೆ ಮೆರೆದ ಸ್ಥಳೀಯ ಹಿಂದೂ ಬಾಂಧವರು

ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕರೆಯಲ್ಲಿ ನೆಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಸಾಗಿ ಬಂದ ಎಲ್ಲಾ ಮುಸ್ಲಿಮ್ ಬಾಂಧವರಿಗೆ ಸ್ಥಳೀಯರಾದ ರತ್ನಾಕರ ಶ್ರೀಯನ್ ಮುಂದಾಳತ್ವದಲ್ಲಿ ಹಿಂದೂ ಬಾಂಧವರು ಸಿಹಿ ಹಂಚಿ ಸೌಹಾರ್ದತೆ ಮೆರೆದರು.


ದೇಶಾದ್ಯಂತ ಮುಸ್ಲಿಂ ಬಾಂಧವರು ಈದ್ ಮಿಲಾದ್ ಅದ್ದೂರಿಯಾಗಿ ಆಚರಿಸಿ. ಹಾಗೆಯೇ ಪ್ರವಾದಿಗಳ ಜೀವನ ಸಂದೇಶಗಳಾದ ಸತ್ಯ, ಶಾಂತಿ, ಸಹಬಾಳ್ವೆ ಮುಂತಾದವುಗಳು ಲೋಕಕಲ್ಯಾಣದ ಹಾದಿಗೆ ಬೆಳಕಾಗಲಿ ಎಂದು ಹಾರೈಸುತ್ತಾ ಜೀವನದ ಅಂತ್ಯದಿನದವರೆಗೂ ಕೋಟತಟ್ಟು ಪಡುಕೆರೆ ನಲ್ಲಿ ಶಾಂತಿ ಸೌಹಾರ್ದತೆ ನೆಲೆ ನಿಲ್ಲಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ರತ್ನಾಕರ್ ಶ್ರೀಯಾನ್ ಸುರೇಶ್ ಕಚ್ಕೆರೆ , ಅಶೋಕ್ ಬಡಾಹೋಳಿ, ದೇವೇಂದ್ರ ಗಾಣಿಗ ಕೋಟ ಉಪಸ್ಥಿತರಿದ್ದರು.