ಡೈಲಿ ವಾರ್ತೆ: 24/Sep/2024

ಮುಹಮ್ಮದ್ ಶರೀಫ್ ಅರ್ಕುಳ ನಿಧನ: ಎಸ್‌ಡಿಪಿಐ ಸಂತಾಪ

ಮಂಗಳೂರು: ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಶರೀಫ್ ಅರ್ಕುಳ ರವರು ಇಂದು ನಿಧನರಾಗಿದ್ದಾರೆ. ಇವರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಉಸ್ಮಾನ್ ಗುರುಪುರ‌ ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಶರೀಫ್ ರವರು ಪಕ್ಷದ ಬೆಳವಣಿಗೆಗೆ ಶಾರೀರಿಕವಾಗಿ ಹಾಗೂ ಆರ್ಥಿಕವಾಗಿ ಸಹಾಯ ಮಾಡುತ್ತಾ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದರು. ಹಾಗೂ ರಹ್ಮಾನಿಯಾ ಜುಮಾ ಮಸೀದಿ ಅರ್ಕುಳ ಇದರ ಆಡಳಿತ ಕಮಿಟಿಯಲ್ಲಿ ಸುಧೀರ್ಘ ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಸಮುದಾಯಕ್ಕೆ ಮತ್ತು ಸಮಾಜಕ್ಕೆ ಸೇವೆಯನ್ನು ನೀಡಿದ್ದು. ಅವರ ಅಗಲುವಿಕೆಯು ಸಮುದಾಯಕ್ಕೆ, ಸಮಾಜಕ್ಕೆ ಮತ್ತು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ.

ಸೃಷ್ಟಿಕರ್ತನು ಮೃತರ ಪಾರತ್ರಿಕ ಜೀವನವನ್ನು ಯಶಸ್ಸುಗೊಳಿಸಲಿ. ಕುಟುಂಬಕ್ಕೆ ಮತ್ತು ಬಂಧು ಬಳಗಕ್ಕೆ ಇವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ.

ಉಸ್ಮಾನ್ ಗುರುಪುರ
ಅಧ್ಯಕ್ಷರು, ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿ