ಡೈಲಿ ವಾರ್ತೆ: 09/OCT/2024

ಕುಂದಾಪುರ: ಆಟೋ ರಿಕ್ಷಾ ಮೆಕಾನಿಕ್‌ ರವಿ ಹೃದಯಾಘಾತದಿಂದ ಮೃತ್ಯು

ಕುಂದಾಪುರ : ಕುಂದಾಪುರ ನಗರದ ಕೆ.ಎಸ್‌.ಆರ್‌.ಟಿ.ಸಿ ಬಸ್ಟ್ಯಾಂಡ್‌ ಎದುರುಗಡೆಯ ಸರ್ವೀಸ್‌ ರಸ್ತೆಯಲ್ಲಿ ಅಟೋರಿಕ್ಷಾ ಗ್ಯಾರೇಜ್‌ ಮಾಲಕರಾದ ಬಸ್ರೂರು ನಿವಾಸಿ ರವಿ (49) ಎಂಬವರು ಹೃದಯಾಘಾತದಿಂದ ನಿನ್ನೆ ಮಂಗಳವಾರ ಮಧ್ಯರಾತ್ರಿಯ ವೇಳೆ ನಿಧನ ಹೊಂದಿದರು.


ನಿನ್ನೆ ರಾತ್ರಿ ರವಿ ಅವರು ಸ್ಥಳೀಯ ಗ್ಯಾರೇಜ್ ನಲ್ಲಿ ನಿದ್ರಿಸಿದ್ದರು ಇಂದು ಬೆಳಿಗ್ಗೆ ಗ್ಯಾರೇಜಿನ ಬಾಗಿಲು ತೆರೆಯದ ಹಿನ್ನಲೆಯಲ್ಲಿ ರಿಕ್ಷಾ ಚಾಲಕರೊಬ್ಬರು ನೋಡಿದಾಗ ಉಸಿರು ನಿಂತ ಸ್ಥಿತಿಯಲ್ಲಿದ್ದರು ತಕ್ಷಣ ಅವರನ್ನು ಶ್ರೀದೇವಿ ನರ್ಸಿಂಗ್‌ ಹೋಂಗೆ ಕರೆದುಕೊಂಡು ಹೋಗಲಾಯಿತು.
ಅಲ್ಲಿ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ

ಅವಿವಾಹಿತರಾದ ರವಿ ಎಂಬವರು ಚಿಕ್ಕಂದಿನಿಂದಲೇ ಗ್ಯಾರೇಜ್‌ ಕೆಲಸಕ್ಕೆ ಸೇರಿ ನಂತರ ರಿಕ್ಷಾ ಮೆಕಾನಿಕ್‌ ಆಗಿ ಕಳೆದ 25 ವರ್ಷಗಳಿಂದ ಅಟೋರಿಕ್ಷಾ ರಿಪೇರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.