ಡೈಲಿ ವಾರ್ತೆ: 27/OCT/2024

ವರದಿ: ಅಬ್ದುಲ್ ರಶೀದ್ ಮಣಿಪಾಲ
ಕೃಪೆ ಗಣೇಶ್ ರಾಜ್ ಸರಳೆ ಬೆಟ್ಟು

ಪರ್ಕಳ: ತುಳು ಚಿತ್ರರಂಗದ ನಾಟಕ ಕಲಾವಿದ ಬೋಜರಾಜು ವಾಮಂಜೂರು ಕಾರು ಅಪಘಾತ – ಕಲಾವಿದರು ಪ್ರಾಣಪಾಯದಿಂದ ಪಾರು

ಮಣಿಪಾಲ: ” ಏರ್ಲಾ ಗ್ಯಾರೆಂಟಿ ಅತ್ತ್” ನಾಟಕ ಪ್ರದರ್ಶನಕ್ಕೆ ತೆರಳಿದ್ದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ನಾಟಕ ತಂಡದ ಸದಸ್ಯರು ಸಂಚರಿಸುವ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾದ ಘಟನೆ ಪರ್ಕಳ, ಈಶ್ವರ ನಗರದ ನಗರಸಭೆಯ ಪಂಪ್ ಹೌಸ್ ಬಳಿ ಅ. 27 ರಂದು ಭಾನುವಾರ ರಾತ್ರಿ ಸಂಭವಿಸಿದೆ.

ತುಳು ನಾಟಕದ ಖ್ಯಾತ ಕಲಾವಿದ ಭೋಜರಾಜ ವಾಮಂಜೂರ್ ಅವರು ಇದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಈ ಅಪಘಾತದಿಂದ ಕಲಾವಿದರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಉಡುಪಿಯ ಹೀರೆಬೆಟ್ಟು ವಿನಲ್ಲಿ ಇಂದು ಸಂಜೆ ನಾಟಕ ಪ್ರದರ್ಶನ ಇತ್ತು.. ಏರ್ಲಾ ಗ್ಯಾರಂಟಿ ಅತ್ತು.. ಈ ರಸ್ತೆಯಲ್ಲಿ ಕೂಡ ಪ್ರಯಾಣಿಸಿದವರು. ಯಾರು ಗ್ಯಾರೆಂಟಿಯಲ್ಲ. ಎಂಬುದು ರಸ್ತೆಯಲ್ಲಿ ಸೇರಿದ್ದ ಜನರು ಹೇಳುತ್ತಿದ್ದರು.. ತಂಡದ ಕಲಾವಿದರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.. ಇಂದು ಬೆಳಿಗ್ಗೆ ಕೂಡ ಕಾರು ಅಪಘಾತವಾಗಿದೆ. ಈಗ ಸಂಜೆ. ಮಂಗಳೂರಿನ ತುಳು ನಾಟಕದತಂಡದ ದಾರಿ ತಪ್ಪಿ.. ನಗರಸಭೆಯ ಪಂಪ್ ಹೌಸ್ ಬಳಿ ಅಪಘಾತವಾಗಿದೆ.

ನಗರಸಭೆ ,ಜಿಲ್ಲಾಡಳಿತ, ಸಂಬಂಧಪಟ್ಟ. ಗುತ್ತಿಗೆದಾರರ ಮೇಲೆ ಇನ್ನಾದರೂ ಕ್ರಮ ಕೈಗೊಳ್ಳುತ್ತಾರೋ. ಕಾದು ನೋಡಬೇಕಾಗಿದೆ.. ಒಟ್ಟಿನಲ್ಲಿ ಯಾರಿಗೂ ಪ್ರಯಾಣಿಸುವವರಿಗೆ ಈ ರಾಷ್ಟ್ರೀಯ ಹೆದ್ದಾರಿ ಗ್ಯಾರಂಟಿ ಇಲ್ಲ ಅಂತ ಸಾಬೀತಾಗಿದೆ.