


ಡೈಲಿ ವಾರ್ತೆ: 15/ಮಾರ್ಚ್ /2025


ಮಂಗಳೂರು| ಅಕ್ರಮ ಗೋ ಮಾಂಸ ಸಾಗಾಟ – ಭಜರಂಗದಳ ಕಾರ್ಯಕರ್ತರಿಂದ ಕಾರ್ಯಾಚರಣೆ, ಆರೋಪಿ ಸ್ಕೂಟರ್ ಬಿಟ್ಟು ಪರಾರಿ

ಮಂಗಳೂರು: ವ್ಯಕ್ತಿ ಯೋರ್ವ ಸ್ಕೂಟರ್ ನಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದು ಭಜರಂಗದಳ ಕಾರ್ಯಕರ್ತರ ಕಾರ್ಯಾಚರಣೆಯಿಂದ ಆರೋಪಿ ಸ್ಕೂಟರ್ ಬಿಟ್ಟು ಪರಾರಿಯಾದ ಘಟನೆ ಮಾ. 15 ರಂದು ಶನಿವಾರ ಕುಲಶೇಖರ, ಕೈಕಂಬ ಬಳಿ ನಡೆದಿದೆ.
ಸ್ಕೂಟರ್ ನಲ್ಲಿ 100 ಕೆ.ಜಿ.ಗೂ ಅಧಿಕ ದನದ ಮಾಂಸ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ.
ಈ ವೇಳೆ ಭಜರಂಗದಳ ಕಾರ್ಯಕರ್ತರು ಸ್ಕೂಟರನ್ನು ತಡೆಯುತ್ತಿದ್ದಂತೆ ಸವಾರ ಸ್ಕೂಟರ್ ಬಿಟ್ಟು ಪರಾರಿಯಾಗಿದ್ದಾನೆ. ಘಟನೆ ಬಳಿಕ ಪೋಲೀಸರಿಗೆ ಮಾಹಿತಿ ನೀಡಲಾಗಿದೆ.