



ಡೈಲಿ ವಾರ್ತೆ: 19/ಏಪ್ರಿಲ್/2025


ನಾಪತ್ತೆಯಾಗಿದ್ದ ಉಡುಪಿಯ ಹೊಟೇಲ್ ಮಾಲಕ ಪತ್ತೆ

ಉಡುಪಿ: ವಾರದ ಹಿಂದೆ ಕಾಣೆಯಾಗಿದ್ದ ಉಡುಪಿಯ ತೆಂಕಪೇಟೆಯ ಖ್ಯಾತ ಹೊಟೇಲ್ ಮಾಲಕ ಅಜಿತ್ ಕುಮಾರ್ ಅವರು ಪತ್ತೆಯಾಗಿದ್ದಾರೆ.
ಮನಸ್ಸಿಗೆ ಬೇಸರವಾಗಿದ್ದ ಕಾರಣಕ್ಕೆ ಯಾರಿಗೂ ಹೇಳದೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದೆ ಎಂಬುವುದಾಗಿ ಅವರು ಉಡುಪಿ ನಗರ ಠಾಷೆಯ ಪೊಲೀಸರಲ್ಲಿ ತಿಳಿಸಿದ್ದಾರೆ.
ಇವರು ಎಪ್ರಿಲ್ 12ರಂದು ಪಾರ್ಸೆಲ್ ಕೊಡಲು ಸ್ಕೂಟರ್ ನಲ್ಲಿ ಹೋಗಿದ್ದವರು ಮರಳಿ ಹೊಟೇಲ್ ಗೂ ಬಾರದೆ, ಮನೆಗೂ ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.