



ಡೈಲಿ ವಾರ್ತೆ: 25/ಏಪ್ರಿಲ್/2025


ಸಾಸ್ತಾನ| ಮೇ. 3, 4 ರಂದು ಕಳಿಬೈಲ್ ನೇಮೋತ್ಸವ

ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಕೆಳಬೆಟ್ಟು, ಮೂಡಹಡು ಗ್ರಾಮದ
ಶ್ರೀ ಕ್ಷೇತ್ರ ಕಳಿಬೈಲ್ ತುಳಸಿ ಅಮ್ಮ ಶಿರಿಸಿ ಮಾರಿಕಾಂಬೆ ಪಂಜುರ್ಲಿ ಮತ್ತು ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನದ ಗೆಂಡೋತ್ಸವ ಮತ್ತು ನೇಮೋತ್ಸವವು ಮೇ. 3 ಮತ್ತು 4 ರಂದು ನಡೆಯಲಿದೆ.
ದಿನಾಂಕ 03/05/2025ನೇ ಶನಿವಾರ ಬೆಳಿಗ್ಗೆ 6:00 ರಿಂದ ಶ್ರೀ ವೇದಮೂರ್ತಿ ನಾಯರಬೆಟ್ಟು ಶ್ರೀ ರಮೇಶ್ ಭಟ್ ಇವರ ನೇತೃತ್ವದಲ್ಲಿ ಶ್ರೀ ತುಳಸಿ ಅಮ್ಮನ ಶಿಲಾಮಯ ಬಿಂಬ ಪ್ರತಿಷ್ಠೆ.
ನವಕ ಪ್ರಧಾನ ಆದಿವಾಸಿ ಹೋಮ, ಕಲಶಾಭಿಷೇಕ ಪ್ರಸಾದ ವಿತರಣೆ.
ಮಧ್ಯಾಹ್ನ 12:30ಕ್ಕೆ ಪೂಜೆ, ಪ್ರಸಾದ ವಿತರಣೆ, *ಅನ್ನ ಸಂತರ್ಪಣೆ*
ಮಧ್ಯಾಹ್ನ 2:00ಕ್ಕೆ ನೇಮೋತ್ಸವದ ಚಪ್ಪರದ ಮುಹೂರ್ತ.
ಮಧ್ಯಾಹ್ನ 3:00 ಕ್ಕೆ ಭಂಡಾರ ಇಳಿಯುವುದು
“ಕಳಿಬೈಲ್ ನೇಮೋತ್ಸವ’
ಯಕ್ಷಿ ಕೋಲ ಸೇವೆ
ಪಂಜುರ್ಲಿ/ಗುರಮ್ಮ ಕೋಲ ಸೇವೆ
ಮಲಸಾವರಿ ಆಕಾಶರಾಹು ಕೋಲ ಸೇವೆ
ಕಳಿಬೈಲು ಕೊರಗಜ್ಜ ಕೋಲ ಸೇವೆ
ಸಂಜೆ 6:00 ಕ್ಕೆ ಶಿರಸಿ ಅಮ್ಮನ ದರ್ಶನ ಸೇವೆ
ಗೆಂಡದ ಮಾಸ್ತಿ ಅಮ್ಮನ ದರ್ಶನ ಸೇವೆ
ಗೆಂಡೋತ್ಸವ
ದಿನಾಂಕ 04/05/2025 ಭಾನುವಾರ
ವಾರ್ಷಿಕ ಮಾರಿ ಪೂಜೆ
ಬೆಳಿಗ್ಗೆ 10:00ಕ್ಕೆ ಪಂಜುರ್ಲಿ ದೈವದ ದರ್ಶನ ಸೇವೆ
ಮಧ್ಯಾಹ್ನ 2:00ಕ್ಕೆ ತುಳಸಿ ಅಮ್ಮನ ದರ್ಶನ ಸೇವೆ
ಶ್ರೀ ಮಳಿಯಾಳಿ ಭಂಗಿ ಅಜ್ಜನ ದರ್ಶನ ಸೇವೆ
ಹುಲಿದುರ್ಗಿ ಅಮ್ಮನ ದರ್ಶನ ಸೇವೆ
ಸಂಜೆ 4:00 ರಿಂದ ಶಿರಸಿ ಮಾರಿಕಾಂಬೆ ದರ್ಶನ ಸೇವೆ
ಮಾರಿಪೂಜೆ
ರಾತ್ರಿ 7:00ಕ್ಕೆ ಸ್ವಾಮಿ ಕೊರಗಜ್ಜನ ದರ್ಶನ ಸೇವೆ ನಡೆಯಲಿದೆ ಎಂದು ಶ್ರೀ ಕಳಿಬೈಲು ಸ್ವಾಮಿ ಕೊರಗಜ್ಜ ದೈವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಅಭಿಜಿತ್ ಪಾಂಡೇಶ್ವರ ಹಾಗೂ ಶ್ರೀ ಕ್ಷೇತ್ರ ಕಳಿಬೈಲ್ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಎಂ ಸಿ ಚಂದ್ರಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.