ಡೈಲಿ ವಾರ್ತೆ: 30/ಏಪ್ರಿಲ್/2025

ಮೇ. 2 ರಿಂದ ಕೋಟದಲ್ಲಿ ಹಲಸು, ಮಾವು, ಕೃಷಿ ಮೇಳ

ಕೋಟ: ಸಂಸ್ಕೃತಿ ಸಂಭ್ರಮ ಟ್ರಸ್ಟ್ ಕೋಟ ಆಶ್ರಯದಲ್ಲಿ, ಕೋಟ ವಿಧಾತ್ರಿ ರೈತ ಉತ್ಪಾದಕರ ಸಂಸ್ಥೆ, ಕೋಟ ಸಹಕಾರಿ ವ್ಯವಸಾಯಿಕ ಸಂಘದ, ಗೀತಾನಂದ ಫೌಂಡೇಶನ್ (ರಿ)ಮಣೂರು ಪಡುಕರೆ ಇದರ ಸಹಭಾಗಿತ್ವ ಹಾಗೂ ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರ, ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಶ್ರಯದಲ್ಲಿ ಕೋಟ ಇತಿಹಾಸದಲ್ಲೇ ಪ್ರಥಮ ಬಾರಿಗೆ ಹಲಸು, ಮಾವು, ಕೃಷಿಮೇಳ ಮೇ.2ರಿಂದ 4ರವರೆಗೆ ಜರುಗಲಿದೆ ಎಂದು ಸಂಸ್ಕೃತಿ ಸಂಭ್ರಮ ಟ್ರಸ್ಟ್ನ ಪ್ರಮುಖ ಸತೀಶ್ ಕುಮಾರ್ ಕುಂದಾಪುರ ಕೋಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೇ 2ರಂದು ಮೇ 2ರಂದು ಸಂಜೆ 4ರಂದು ಉದ್ಘಾಟನೆ ನಡೆಯಲಿದ್ದು, ಶಾಸಕ ಕಿರಣ್ ಕೊಡ್ಗಿ ಉದ್ಘಾಟಿಸಲಿದ್ದಾರೆ. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಸ್ಟಾಲ್ ಗೆ ಚಾಲನೆ ನೀಡಲಿದ್ದಾರೆ ಈ ಸಂದರ್ಭ ಸ್ಥಳೀಯ ಸಂಘ ಸಂಸ್ಥೆಗಳಾದ ಟ್ರಾವೆಲ್ ಲಿಂಕ್ಸ್, ಪಂಚವರ್ಣ, ವರುಣತೀರ್ಥ ವೇದಿಕೆ ಸಂಸ್ಥೆಯನ್ನು ಗೌರವಿಸಲಾಗುವುದು. ಮೇಳದ ಪ್ರಯುಕ್ತ ವಿವಿಧ ತಳಿಯ ಹಲಸು, ಮಾವಿನಹಣ್ಣಿನ ಪ್ರದರ್ಶನ ಮತ್ತು ಮಾರಾಟ, ಹಲಸು ಮತ್ತು ಮಾವಿನ ಉಪ ಉತ್ಪನ್ನಗಳ ಮಳಿಗೆ, ವಿವಿಧ ತಳಿಯ ಹಲಸು ಮತ್ತು ಮಾವಿನ ಗಿಡ ಮತ್ತು ಇತರ ಹಣ್ಣಿನ, ಹೂವಿನ, ತರಕಾರಿ ಬೀಜದ ಮಳಿಗೆ ತೆರೆಯಲಾಗುವುದು, ಕೃಷಿ ಮಾಹಿತಿ ಕಾರ್ಯಾಗಾರ, ಕರಕುಶಲ ಮತ್ತು ನೇಯಿಗೆಯ ಬಟ್ಟೆ ಮಳಿಗೆ, ಇತರ ಗೃಹೋಪಯೋಗಿ ವಸ್ತುಗಳ ಮಳಿಗೆಯನ್ನು ಸಹ ತೆರೆಯಲಾಗುವುದು ಎಂದರು.

ಮೇ 3 ರಂದು ಕೋಟ ವಿಧಾತ್ರಿ ರೈತ ಉತ್ಪಾದಕರ ಸಂಸ್ಥೆವತಿಯಿಂದ ರೈತರ ಎಕತೆ ಕೇಂದ್ರ ಉದ್ಘಾಟನೆ,
ಮೇ 4 ರಂದು ಕೃಷಿ ಸಂಭ್ರಮ,‌ ಕೃಷಿಕರಿಗೆ ಸನ್ಮಾನ ನಡೆಯಲಿದೆ ಎಂದರು.
ಮೇ 4 ರಂದು ಸಂಜೆ5ಕ್ಕೆ ಸಮಾರೋಪ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಕೃತಿ ಸಂಭ್ರಮ ಟ್ರಸ್ಟ್ನ ಮುಖ್ಯಸ್ಥರಾದ ಇಬ್ರಾಹಿಂ ಕೋಟ, ರಮೇಶ್ ಮೆಂಡನ್,
ಶ್ರೀಧರ ಮರವಂತೆ ಉಪಸ್ಥಿತರಿದ್ದರು.