ಡೈಲಿ ವಾರ್ತೆ: 06/JUNE/2025

ತ್ಯಾಗ – ಬಲಿದಾನಗಳ ಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಿ: ಜಿಲ್ಲಾ ವಕ್ಫ್ ಅಧ್ಯಕ್ಷ ಸಿ. ಹೆಚ್. ಅಬ್ದುಲ್ ಮುತ್ತಾಲಿ ವಂಡ್ಸೆ

ಪವಿತ್ರ ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಹಬ್ಬವಾಗಿದ್ದು ಇಬ್ರಾಹಿಂ ಮತ್ತು ಇಸ್ಮಾಯಿಲ್ ನಬಿ (ಅ) ರವರ ಸ್ಮರಣೆಯಾಗಿದೆ. ಬಕ್ರೀದ್‌ ಹಬ್ಬದ ಪ್ರಯುಕ್ತ ಖುರ್ಬಾನಿ ಕೊಡುವುದು ಇಸ್ಲಾಮಿನ ವಿಧಿಯಾಗಿರುತ್ತದೆ.

ಬಕ್ರೀದ್ ಹಬ್ಬದ ಆಚರಣೆ ಮತ್ತು ಧಾರ್ಮಿಕ ಚಟುವಟಿಕೆಯ ಸಂದರ್ಭಗಳಲ್ಲಿ ಪ್ರಾಣಿ ಬಲಿದಾನ ಪ್ರಕ್ರಿಯೆಯಲ್ಲಿ ಯಾವುದೇ ಸಮುದಾಯದ ಧರ್ಮಿಯವರ ಭಾವನೆಗೆ ಧಕ್ಕೆಯಾಗದಂತೆ ಕಾನೂನಿನ ಚೌಕಟ್ಟಿಗೆ ಒಳಪಟ್ಟಂತೆ ಖುರ್ಬಾನಿ ನೀಡಬೇಕು ಬಕ್ರೀದ್ ಹಬ್ಬವನ್ನು ಬಹಳ ಶಾಂತಿಯುತವಾಗಿ ನಡೆಸಬೇಕು , ಎಲ್ಲಾ ಧರ್ಮಿಯರೊಂದಿಗೆ ಈ ಹಬ್ಬದ ಸಂತಸವನ್ನು ಹಂಚಬೇಕು ಎಲ್ಲರೂ ಜಾಗರೂಕತೆಯಿಂದ ಹಬ್ಬವನ್ನು ಆಚರಿಸಬೇಕು ಈ ಬಗ್ಗೆ ಜವಾಬ್ದಾರಿಯುತ ನಾಯಕರ ಹಾಗೂ ಉಲಮಾ ಗಳ ಸಂದೇಶ ಪಾಲಿಸುವುದು ಅಗತ್ಯವಾಗಿದೆ ಎಂದು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಸಿ. ಹೆಚ್. ಅಬ್ದುಲ್ ಮುತ್ತಾಲಿ ವಂಡ್ಸೆ ಹಾಗೂ ಉಪಾಧ್ಯಕ್ಷರಾದ ಕೆ ಎ ಅಬ್ದುರ್ರಹ್ಮಾನ್ ಕಲ್ಕಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.